News Karnataka Kannada
Saturday, April 27 2024
ಹಾಸನ

ರೇವಣ್ಣ ಅವರ ಗೂಂಡಾವರ್ತನೆ ವಿರುದ್ಧ ನಿರಂತರ ಹೋರಾಟ: ಧರ್ಮೇಶ್

Will continue to fight against Revanna's goondaism: Dharmesh
Photo Credit : News Kannada

ಹಾಸನ : ಹೆಚ್.ಡಿ.ರೇವಣ್ಣ ಅವರ ಗುಂಡಾ ವರ್ತನೆ, ಅವರ ನಡವಳಿಕೆ ಹಾಗೂ ಅವರ ದೌರ್ಜ ನ್ಯದ ವಿರುದ್ಧ ತಮ್ಮ ಹೋರಾಟ ನಿರಂತರ ಎಂದು ಸಿ.ಪಿ.ಐ ಎಂ. ಮುಖಂಡ ಧರ್ಮೇಶ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾವು ಹಲವಾರು ವರ್ಷಗಳಿಂದ ಹೊಳೆನರಸೀಪುರ ಕ್ಷೇತ್ರದಲ್ಲಿ ರೇವಣ್ಣ ಅವರಿಂದ ನಡೆದಿರುವ ವಿವಿಧ ದೌರ್ಜನ್ಯ ಪ್ರಕರಣಗಳ ವಿರುದ್ಧ ಹೋರಾಟ ನಡೆಸಿದ್ದು ಮುಂದೆಯೂ ಕೂಡ ನಾವು ರೇವಣ್ಣ ಅವರ ದುಂಡಾ ವರ್ತನೆ, ಸ್ವಜನ ಪಕ್ಷಪಾತದ ವಿರುದ್ಧ ಹೋರಾಟ ನಡೆಸುವುದಾಗಿ ಹೇಳಿ ದರಲ್ಲದೆ. ದೇಶದಲ್ಲಿ ಕೋಮು ವಾದಿ ಪಕ್ಷವನ್ನು ದೂರ ವಿಡಬೇಕಾದ ಅನಿವಾರ್ಯತೆಯಿಂ ದಾಗಿ ಮಾತ್ರ ಜೆಡಿಎಸ್ ಬೆಂಬಲಿ ಸಲು ನಿರ್ಧರಿಸಿರುವುದಾಗಿ ಹೇಳಿದರು.
ಇನ್ನು ಹಾಸನ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸ ಬೇಕೆಂದು ಮನವಿ ಮಾಡಿದ ಅವರು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್.ಪಿ.ಸ್ವರೂಪ್ ಬೆಂ ಬಲಿಸಬೇಕೆಂದು ಮನವಿ ಮಾಡಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಸಂವಿಧಾನ ವಿರೋಧಿ ಚಟುವಟಿಕೆಗಳು ಹೆಚ್ಚಾಗಿದೆ. ಆದ್ದರಿಂದ ಈ ಬಾರಿಯ ಚುನಾವಣೆ ಯಲ್ಲಿ ಬಿಜೆಪಿಯನ್ನು ಹಿಮ್ಮಟ್ಟಿಸಲು ಹಾಗೂ ಮುಂದೆ ಸರ್ಕಾರ ರಚಿಸಿದಂತೆ ಬಿಜೆಪಿ ನಿರ್ಣಾಯಕವಾಗಿ ಸೋಲಿಸಬೇಕು ಎಂದು ಮನವಿ ಮಾಡಿದರು.

ದೇಶದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಮಣ್ಣು ಪಾಲು ಮಾಡಿ ನೂರಾರು ಕೋಟಿಗಳನ್ನು ಸುರಿದು ಪ್ರತಿ ಪಕ್ಷಗಳ ಶಾಸಕರನ್ನು ಖರೀದಿ ಮಾಡಿ ಅಕ್ರಮವಾಗಿ ನಾಲ್ಕು ವರ್ಷಗಳ ಹಿಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಯ ಅವಾಂತರಗಳು ನಿಂತಿಲ್ಲ ; ಮುಂದೆಯೂ ಸಹ ಅವರು ಈ ರೀತಿ ಆಡಳಿತ ನಡೆಸದಂತೆ ತಡೆಯುವ ನಿಟ್ಟಿನಲ್ಲಿ ಸಿ ಪಿ ಐ( ಎಂ) ಈ ರೀತಿಯ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅರವಿಂದ್, ಸತ್ಯನಾರಾಯಣ, ಪೃಥ್ವಿ, ಸೌಮ್ಯ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು