News Kannada
Friday, March 24 2023

ಮಡಿಕೇರಿ

ಸೋಮವಾರಪೇಟೆ: ಹಿಂದೂ ಕಾರ್ಯಕರ್ತರ ಗಡಿಪಾರು ನೋಟಿಸ್ ಹಿಂಪಡೆಯದಿದ್ದರೆ ಉಗ್ರ ಹೋರಾಟ

Somwarpet: Hindu activists to protest if deportation notices are not withdrawn
Photo Credit : By Author

ಕೊಡಗು: ಜಿಲ್ಲೆಯ ಇಬ್ಬರು ಹಿಂದೂ ಸಾಮಾಜಿಕ ಕಾರ್ಯಕರ್ತರುಗಳಾದ ಕವನ್ ಕಾವೆರಪ್ಪ ಹಾಗೂ ವಿನಯ್ ರವರುಗಳನ್ನು ಗಡಿಪಾರು ಮಾಡುವ ಕುರಿತು ನೀಡಿರುವ ನೋಟಿಸ್ ಕ್ರಮವನ್ನು ವಿರೋದಿಸಿ ಇಂದು ಸೋಮವಾರಪೇಟೆ ತಾಲೂಕು ಹಿಂದುಜಾಗರಣ ವೇದಿಕೆ ಹಾಗೂ ಹಿಂದೂಪರ ಸಂಘಟನೆಗಳು ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ಸಂಘಟನೆಯ ತಾಲೂಕು ಸಂಚಾಲಕ ಬೋಜೆಗೌಡ ಮಾತನಾಡಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಕ್ರಮವನ್ನು ತೀವ್ರವಾಗಿ ಖಂಡಿಸಿದರು.

ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ದಮನಿಸುವ ಕ್ರಮಕ್ಕೆ ಆಡಳಿತ ವ್ಯವಸ್ಥೆ ಮುಂದಾಗಿರುವುದು ವಿಪರ್ಯಾಸ. ಹಿಂದೂ ಸಂಘಟನೆಗಳು ಬಲಿಷ್ಟ ವಾಗಿರುವಲ್ಲಿ ಶಾಂತಿಯವಾತಾವರಣ ವಿರುತ್ತದೆ ಇದನ್ನು ಸಹಿಸದ ದುಶ್ಟ ಶಕ್ತಿಗಳು ಕೆಲವರನ್ನು ಗಡಿಪಾರು ಮಾಡಲು ಹವಣಿಸುತ್ತಿದೆ ಎಂದು ಆರೋಪಿಸಿದ ಅವರು ಗಡಿಪಾರು ಮಾಡಲು ಕಾರಣಕೇಳಿ ನೀಡಿರುವ ನೋಟೀಸನ್ನು ವಾಪಸ್ ಪಡೆಯಬೇಕು ಇಲ್ಲವಾದಲ್ಲಿ ಜಿಲ್ಲೆಯಾದ್ಯಂತ ಉಗ್ರಹೊರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭ ಹಿಂ.ಜಾ.ವೆ.ಜಿಲ್ಲಾ ಘಟದ ಪ್ರಮುಖರಾದ ಸುಭಾಷ್ಟಿಮ್ಮಯ್ಯ,ಉಮೇಶ್,ಸುನಿಲ್ ಮಾದಪ್ಪ, ತಾಲೂಕು ಪ್ರಮುಖರಾದ ವಿನು,ಗಿರೀಶ್,ಮಾದಪ್ಪ, ವಿಶ್ವ ಹಿಂದೂ ಪರಿಷತ್ ನ ಹುಲ್ಲೂರಿಕೊಪ್ಪ ಚಂದ್ರು,ಕೆ.ಜಿ.ಸುರೇಶ್, ಬಿಜೆಪಿಯ ದರ್ಶನ್ ಜೋಯಪ್ಪ, ರೂಪಸತಿಶ್, ದೀಪಕ್ ಹಾಗೂ ಮುಂತಾದವರು ಹಾಜರಿದ್ದರು.

See also  ಬೆಂಗಳೂರು: ಟಿವಿಎಸ್ ಎನ್‌ಟಿಒಆರ್‌ಕ್ಯು 125 ರೇಸ್ ಆವೃತ್ತಿಗೆ ಸಾಗರ ನೀಲಿ ಬಣ್ಣ ಬಿಡುಗಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1620
Coovercolly Indresh

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು