ಮಡಿಕೇರಿ: ಸಂಪಾಜೆ ಗ್ರಾಮದ ಕೊಯನಾಡು ಬೈಲು ಭಾಗಕ್ಕೆ ಪಯಸ್ವಿನಿ ನದಿಗೆ ಅಡ್ಡಲಾಗಿ ಕಾಲುಸೇತುವೆ ಕಳೆದ ಬಾರಿಯ ಬಾರೀ ಮಳೆಗೆ ಈ ಸೇತುವೆಯಲ್ಲಿ ದೊಡ್ಡ ಗಾತ್ರದ ಮರದ ದಿಮ್ಮಿಗಳು ಅಡ್ಡಲಾಗಿ ನಿಂತು ನದಿ ನೀರು ಸಮೀಪದಲ್ಲಿರುವ ಮನೆ, ಕೃಷಿ ತೋಟಗಳಿಗೆ ನೀರು ನುಗ್ಗಿ ಅನಾಹುತ ಸಂಭವಿಸಿದೆ.
ಇದನ್ನು ಮಾನ್ಯ ಜಿಲ್ಲಾಧಿಕಾರಿಗಳು, ಇನ್ನಿತರ ಅಧಿಕಾರಿಗಳು, ಜನಪ್ರತಿನಿಧಿಗಳು ವೀಕ್ಷಣೆ ಮಾಡಿರುತ್ತಾರೆ.ಒಂದಿಷ್ಟು ಮರಗಳನ್ನು ಮಾತ್ರ ತೆಗಿಸಿದಲ್ಲದೆ.ಇನ್ನೂ ಸೇತುವೆ ಯ ಅರ್ಧ ಭಾಗ ಮರದ ದಿಮ್ಮಿ ಗಳಿಂದ ಮುಚ್ಚಲ್ಪಟ್ಟಿದೆ..ಈಗಾಗಲೇ ಮಳೆ ಶುರುವಾಗಿದ್ದು ನದಿ ನೀರು ಹೆಚ್ಚಳವಾದರೆ ಪ್ರವಾಹ ಪರಿಸ್ಥಿತಿ ಬಂದು ಮತ್ತೆ ಬಂದು ಇನ್ನಷ್ಟು ಮುಳುಗಡೆಯಾಗಲಿದೆ.
ಹಾಗೆಯೇ ಈ ಭಾಗಕ್ಕೆ ಇರುವ ಸಂಪರ್ಕ ಕಡಿತಗೊಳ್ಳುತ್ತದೆ,ಕೂಡಲೇ ಸೇತುವೆಯಲ್ಲಿ ತಂಗಿರುವ
ಮರದ ದಿಮ್ಮಿಗಳನ್ನು ತೆರವುಗೊಳಿಸಲು ಸಂಬಂಧಪಟ್ಟವರಿಗೆ ಸೂಚಿಸಿ ಆಗುವ ಪ್ರವಾಹ ಅನಾಹುತಗಳನ್ನು ತಪ್ಪಿಸಬೇಕಾಗಿ ಬೈಲು ಭಾಗ ಗ್ರಾಮಸ್ಥರು ವಿನಂತಿ.