ಮಡಿಕೇರಿ: ಮಂಜಿನ ನಗರಿ ಮಡಿಕೇರಿಯಯಲ್ಲಿ ಭಾನುವಾರದವರೆಗೆ ಮಡಿಕೇರಿಯ ಅಂಚೆ ಕಛೇರಿ ಮುಂಭಾಗದ ಹಾಪ್ ಕಾಮ್ಸ್ ನಲ್ಲಿ ಮೇಳ ಆಯೋಜಿಸಲಾಗಿದೆ.
ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಪುತ್ತೂರು ಸೇರಿದಂತೆ ರಾಜ್ಯದ ಹಲವೆಡೆಗಳಿಂದ ಬಂದಿರುವ ಬೆಳೆಗಾರರು ವಿವಿಧ ಬಗೆಯ ಮಾವಿನ ಹಣ್ಣುಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ
ಹೊಸ ತಳಿಯ ಮಾವು, ಹಲಸು ಬಗ್ಗೆ ಮಾಹಿತಿ – ಸ್ವಾದಿಷ್ಟ ಹಣ್ಣುಗಳ ಮಾರಾಟ ಎರಡನೇ ವರ್ಷದ ಮಾವು ಮೇಳದ ವಿಶೇಷ.
ವಿರಾಜಪೇಟೆ ಶಾಸಕ ಎ ಎಸ್ ಪೊನ್ನಣ್ಣ ವಿಧಾನಪರಿಷತ್ ಸದಸ್ಯ ಸುಜಾಕುಶಾಲಪ್ಪ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ, ಹಾಪ್ ಕಾಮ್ಸ್ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ತೋಟಗಾರಿಕಾ ಇಲಾಖೆ ಉಪನಿದೇ೯ಶಕ ಎಚ್.ಆರ್.ನಾಯಕ್, ಅಧಿಕಾರಿ ಪ್ರಮೋದ್ ಕುಮಾರ್, ಬಿದ್ದಾಟಂಡ ತಮ್ಮಯ್ಯ ಸೇರಿದಂತೆ ಹಲವು ಗಣ್ಯರು ಮೇಳದ ಉದ್ಘಾಟನಾ ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದರು.