ಕೊಡಗು: ಕೇರಳ ರಾಜ್ಯದ ಹಲವು ಯುವಕರು ಇದೀಗ ರಾತ್ರಿ ೧೧ ಗಂಟೆಯ ನಂತರ ಗಡಿ ಭಾಗವಾದ ಮಾಕ್ಕೂಟ ಚೆಕ್ ಪೋಸ್ಟ್ ಮೂಲಕ ಕೊಡಗಿಗೆ ವಾರಕ್ಕೆ ೨ ಬಾರಿ ಪ್ರವೇಶಿಸಿ ಪೆರುಂಬಾಡಿ ತನಕ ಬಂದು ರಾತ್ರಿ ೪ ರ ಬೆಳಗ್ಗಿನ ಜಾವ ಹಿಂತಿರುಗುತ್ತಿದ್ದಾರೆ.
ಕೆಲವು ಹುಡುಗರ ವಾಹನದಲ್ಲಿ ಮಾರಕ ಆಯುಧಗಳು ಕೂಡ ಇರುತ್ತದೆ ಎಂದು ಅ ಭಾಗದ ಜನರು ಹೇಳುತ್ತಾರೆ.. ಇದು ಕಳೆದ ೧ ವರ್ಷದಿಂದ ನಡೆಯುತ್ತಿದ್ದರೂ ಚೆಕ್ಪೋಸ್ಟ್ ನಲ್ಲಿ ಇರುವ ಪೊಲೀಸರು ಹಲವು ಬಾರಿ ಇವರುಗಳಿಗೆ ಎಚ್ಚರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇವರನ್ನು ಪ್ರಶ್ನೆಸಿದರೆ ರಾತ್ರಿ ಕೇರಳದಲ್ಲಿ ತುಂಬಾ ಬಿಸಿ ಇರುವುದರಿಂದ ತಣ್ಣಗೆ ಗಾಳಿ ಸೇವಿಸಲು ಬರುವುದಾಗಿ ಹೇಳುತ್ತಾರೆ.
ತಂಡೊಪ್ಪ ತಂಡವಾಗಿ ದ್ವಿಚಕ್ರ ವಾಹನದಲ್ಲಿ ಬರುವ ಇವರು ಕಣ್ಣೂರ್ ಇರ್ರಿಟಿ, ಮಟ್ಟನೋರ್,ಭಾಗದ ಪುಂಡ ಹುಡುಗರು ಇವರಾಗಿದ್ದು, ಈ ಹಿಂದೆ ಇರ್ರಿಟಿ, ವಲಿತೋಡು ರಸ್ತೆಗಳಲ್ಲಿ ಓಡಾಡುವ ಬೀದಿ ನಾಯಿಗಳು ರಸ್ತೆಯಲ್ಲಿ ಕುತ್ತಿಗೆ, ಬೆನ್ನು ಭಾಗಕ್ಕೆ ಕಡಿದ ಗಾಯಗಳಿಂದ ಹಲವಾರು ನಾಯಿಗಳು ಸಾವನಪ್ಪಿದು ಈ ಬಗ್ಗೆ ಅಲ್ಲಿನ ಪತ್ರಿಕೆಗಳಲ್ಲಿ ಸುದ್ಧಿ ಪ್ರಕಟಗೊಂಡಿದೆ.
ಮಾಕುಟಾ ಪ್ರದೇಶವು ರಕ್ಷಿತ ಅರಣ್ಯ ವಾಗಿದ್ದು, ಅರಣ್ಯ ಇಲಾಖೆ ಕೂಡ ಗಮನ ಹರಿಸಬೇಕಾಗಿದೆ. ಜಿಲ್ಲಾ ಪೊಲೀಸ್ ಸಮಗ್ರ ಮಾಹಿತಿ ಪಡೆದು ಸೂಕ್ತ ಕ್ರಮ ಜಾರಿಗೊಳಿಸದ್ದಿದರೆ ಮುಂದೆ ಹೆಚ್ಚಿನ ಅನಾಹುತಕ್ಕೆ ಕಾರಣವಗಬಹುದು.