ಮಡಿಕೇರಿ: ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕೂಟುಹೊಳೆ ಜಾಕ್ವೆಲಿನ್ ನ 300 ಹೆಚ್.ಪಿ. ಮೋಟರ್ ನಲ್ಲಿ ತಾಂತ್ರಿಕ ದೋಷದಿಂದ ರಿಪೇರಿಯಾಗಿರುವ ಹಿನ್ನಲೆ ನಗರದ ಜನತೆಗೆ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದು, ಈ ಹಿನ್ನಲೆ ಕನಿಷ್ಟ 10 ಟ್ಯಾಂಕರ್ ಗಳಲ್ಲಿ ನೀರು ಸರಬರಾಜು ಮಾಡಲು ಸಿದ್ಧತೆ ಮಾಡಿಕೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ಮಡಿಕೇರಿ ಶಾಸಕ ಡಾ ಮಂತರ್ ಗೌಡ ಸೂಚನೆ ನೀಡಿದ್ದಾರೆ.
ಕೂಟುಹೊಳೆಯ ಪಂಪ್ ಮತ್ತು ಮೋಟಾರ್ ಪದೇ ಪದೇ ರಿಪೇರಿಯಾಗುತ್ತಿದ್ದು ಶಾಶ್ವತ ಪರಿಹಾರಕ್ಕಾಗಿ ಕೂಡಲೇ ಎಂಜಿನಿಯರ್ ಗಳಿಂದ ಹೊಸ ಮೋಟಾರ್ ಮತ್ತು ಪಂಪ್ ಅಳವಡಿಸುವ ಸಲುವಾಗಿ ಕೂಡಲೇ ಅಂದಾಜು ಪಟ್ಟಿ ತಯಾರಿಸಿ ನೀಡುವಂತೆ ಪೌರಾಯುಕ್ತರಿಗೆ ಶಾಸಕರು ಸೂಚಿಸಿದ್ದಾರೆ.
ಶಾಸಕರ ಅನುದಾನದಲ್ಲಿ ಕುಡಿಯುವ ನೀರು ಒದಗಿಸಲು ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಡಾ ಮಂತರ್ ಗೌಡ ಅವರು ತಿಳಿಸಿದ್ದಾರೆ.