News Karnataka Kannada
Friday, March 29 2024
Cricket
ಮಡಿಕೇರಿ

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆ ಗಣತಿಗಾಗಿ ಸಿಬ್ಬಂದಿಗಳಿಗೆ ವಿಶೇಷ ತರಬೇತಿ

Special training to staff for elephant census in Nagarahole Tiger Reserve
Photo Credit : News Kannada

ಮಡಿಕೇರಿ: ರಾಜ್ಯಾದಂತ ಮೂರು ದಿನಗಳ ಆನೆ ಗಣತಿಯು ಮೇ 17 ರಂದು ಪ್ರಾರಂಭವಾಗಿದ್ದು, ಗಣತಿಯು ಮೂರು ದಿನಗಳ ಕಾಲ ನಡೆಯಲಿದ್ದು ಮೊದಲನೇ ದಿನ ಗಸ್ತಿನ ಶೇ.50 ರಷ್ಟು ಭೂಪ್ರದೇಶ ಅಥವಾ 05 ಚ.ಕಿ.ಮೀ ಪ್ರದೇಶದಲ್ಲಿ ಕನಿಷ್ಟ 15 ಕಿ.ಮೀ. ತಿರುಗಾಡಿ ಸ್ಯಾಂಪಲ್ ಬ್ಲಾಕ್ ಕೌಂಟ್ ವಿಧಾನದಲ್ಲಿ ನೇರವಾಗಿ ಕಾಣಿಸುವ ಆನೆಗಳ ಸಂಖ್ಯೆಗಳನ್ನು ದಾಖಲು ಮಾಡಲಾಗುತ್ತದೆ.

ಎರಡನೇ ದಿನ 2 ಕಿ.ಮೀ.ಲೈನ್ ಟ್ರಾನ್ಸಾಕ್ಟ್ ನಲ್ಲಿ ಲದ್ದಿ ಎಣಿಕೆ ವಿಧಾನ ಅನುಸರಿಸಲಾಗುತ್ತದೆ. ಮೂರನೇ ದಿನ ನೀರಿನ ಮೂಲಗಳ (ಕೆರೆ, ಹೊಂಡಗಳಲ್ಲಿ) ಬಳಿ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಕುಳಿತು ಎಣಿಕೆ ಕಾರ್ಯ ನಡೆಸಲಾಗುತ್ತದೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆ ಗಣತಿಗಾಗಿ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡಲಾಗಿದ್ದು ಮೊದಲನೇ ದಿನವಾದ ಇಂದು ಏಕಕಾಲದಲ್ಲಿ 91 ಗಸ್ತುಗಳಲ್ಲಿ 300 ಸಿಬ್ಬಂದಿಗಳು ಸುಮಾರು 500-00 ಚ.ಕಿ.ಮೀ. ಅರಣ್ಯ ಪ್ರದೇಶದಲ್ಲಿ ಗಸ್ತು ಮಾಡಿ ಸ್ಯಾಂಪಲ್ ಬ್ಲಾಕ್ ಕೌಂಟ್ ವಿಧಾನದಲ್ಲಿ ಗಣತಿ ಕಾರ್ಯ ನಡೆಸಿರುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು