ವಿರಾಜಪೇಟೆ: ಕ್ಷೇತ್ರದಲ್ಲಿ ಜೆಡಿಎಸ್ ಉತ್ತಮ ಸಂಘಟನೆ ಹೊಂದಿದೆ. ಕೆಲವು ನಾಯಕರು ಕೊನೇ ಕ್ಷಣದಲ್ಲಿ ಜೆಡಿಎಸ್ ಗೆ ಕೈಕೊಟ್ಟಿದ್ದರಿಂದಾಗಿ ಪಕ್ಷದ ತತ್ವಸಿದ್ದಾಂತಗಳಿಗೆ ತಿಲಾಂಜಲಿ ಇಟ್ಟಿದ್ದಾರೆ. ಮತದಾರರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ.
ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಮತಬ್ಯಾಂಕ್ ಆಗಿ ನೋಡುತ್ತಿದೆಯೇ ವಿನಾ ಯಾವುದೇ ಸ್ಪಂದನ ನೀಡಿಲ್ಲ ಎಂದು ಹೇಳಿರುವ ಮಂಜುನಾಥ್, 200 ಬೂತ್ ಗಳಲ್ಲಿ ಜೆಡಿಎಸ್ ಕಮಿಟಿ ಹೊಂದಿದೆ. ತ್ರಿಕೋನ ಸ್ಪಧೆ೯ ಕ್ಷೇತ್ರದಲ್ಲಿದ್ದು, ಕಾಂಗ್ರೆಸ್ ನೇರ ಸ್ಪಧೆ೯ ನೀಡಿಲ್ಲ ಬಿಜೆಪಿಯಿಂದ ನೇರಸ್ಪಧೆ೯ ಕಂಡುಬಂದಿದೆ ಎಂದೂ ಮಂಜುನಾಥ್ ಹೇಳಿದರು. ಜಿಲ್ಲೆಯಲ್ಲಿ ಅಭಿವೖದ್ದಿ ರಾಜಕೀಯಕ್ಕಿಂತ ಜಾತಿ ರಾಜಕಾರಣ, ಧಮ೯ ರಾಜಕೀಯವೇ ಹೆಚ್ಚಾಗಿ ಕಂಡುಬಂದಿರುವುದು ನೋವಿನ ವಿಚಾರ ಎಂದು ಮಂಜುನಾಥ್ ವಿಷಾದಿಸಿದರು.