News Kannada
Saturday, April 01 2023

ಮಂಡ್ಯ

ಪ್ರಯಾಣಿಕರ ತಂಗುದಾಣದ ದುರಸ್ತಿಗೆ ಪಣತೊಟ್ಟ ಕಿರಣ್ ಬ್ರಿಗೇಡ್

Photo Credit : News Kannada

ಕೆ.ಆರ್.ಪೇಟೆ: ಪ್ರತಿ ಭಾನುವಾರದಂದು ಯಾವುದಾದರೊಂದು ರೀತಿಯ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಬಿ.ಎಂ.ಕಿರಣ್ ಬ್ರಿಗೇಡ್ ಸಂಕಲ್ಪ ತೊಟ್ಟಿದ್ದು, ಈಗಾಗಲೇ ಗಬ್ಬೆದ್ದು ನಾರುತ್ತಿದ್ದ ಆನೆಗೊಳ ಗ್ರಾಮದ ಪ್ರಯಾಣಿಕರ ತಂಗುದಾಣ ಸ್ವಚ್ಛ ಗೊಳಿಸಿ ಸುಣ ಬಣ್ಣ ಬಳಿದು ಸುಂದರವಾಗಿ ಕಂಗೊಳಿಸುವಂತೆ ಮಾಡಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದಾರೆ.

ಬೇರೆ, ಬೇರೆ ರೀತಿಯಲ್ಲಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಬಿ.ಎಂ.ಕಿರಣ್ ಬ್ರಿಗೇಡ್ ಇದೀಗ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಗ್ರಾಮೀಣ ಭಾಗದಲ್ಲಿ ನಿರ್ಮಿಸಿರುವ  ಪ್ರಯಾಣಿಕರ ತಂಗುದಾಣಗಳು ಸಂಬಂಧಿಸಿದವರ ನಿರ್ಲಕ್ಷ್ಯದಿಂದ ಸುಣ್ಣ ಬಣ್ಣ ಕಾಣದೆ, ಗಬ್ಬೆದ್ದು ನಾರುತ್ತಿರುವುದಲ್ಲದೆ, ಸುತ್ತಮುತ್ತ ಗಿಡಗಂಟಿಗಳು ಪ್ರಯಾಣಿಕರು ಅದರತ್ತ ಸುಳಿಯದಂತಹ ಸ್ಥಿತಿಯಲ್ಲಿರುವ ಪ್ರಯಾಣಿಕರ ತಂಗುದಾಣದತ್ತ ಗಮನಹರಿಸಿ ಅವುಗಳನ್ನು ಸ್ವಚ್ಛಗೊಳಿಸುವುದಲ್ಲದೆ, ಸುಣ್ಣ ಬಣ್ಣ ಬಳಿದು ದುರಸ್ತಿಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ.

ಕಿರಣ್ ಬ್ರಿಗೇಡ್ ನ ಕಾರ್ಯವನ್ನು ಶ್ಲಾಘಿಸಿರುವ ಕೃಷ್ಣಾಪುರದ ಗ್ರಾಮದ ಮುಖಂಡ ಹರೀಶ್ ಅವರು, ಯಾವುದೇ ಅಧಿಕಾರ ಇಲ್ಲದೆ ಇದ್ದರೂ ಕೂಡ ಹೆಮ್ಮಾರಿ ಕೊರೊನಾದ ಮೊದಲನೆಯ ಹಾಗೂ ಎರಡನೇ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದ 20 ಸಾವಿರಕ್ಕೂ ಹೆಚ್ಚು ಬಡಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿ ಮೂಲಕ ಮಾನವೀಯತೆ ಮೆರೆದಿದ್ದು,  ಇವರ ಸಮಾಜಮುಖಿ ಕಾರ್ಯದಿಂದ ಸಾರ್ವಜನಿಕರಿಗೆ ಒಳಿತಾಗಲಿ ಎಂದು ಹೇಳಿದ್ದಾರೆ.

ಇನ್ನು ಕರ್ನಾಟಕ ಕುಮಾರ ಪಡೆ ಉಪಾಧ್ಯಕ್ಷ ಹಾಗೂ ಬಿ ಎಂ ಕಿರಣ್ ಯುವ ಬ್ರಿಗೇಡ್ ಲೋಕೇಶ್ ಮತ್ತು ರಾಜೇಶ್ ಬಿ ಎಂ ಕಿರಣ್ ರವರ ಮಾರ್ಗದರ್ಶನ ಮೇರೆಗೆ ಪ್ರತಿ ಭಾನುವಾರ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಅಭಿಯಾನ ಮತ್ತು ಬಣ್ಣ ಹೊಡೆಯುವ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದಾಗಿ ಕಿರಣ್ ಯುವ ಬ್ರಿಗೇಡ್ ತಿಳಿಸಿದೆ.

ಈ ಸಂದರ್ಭದಲ್ಲಿ ಕುಮಾರಪಡೆ ಅಧ್ಯಕ್ಷರಾದ ನಟರಾಜ್, ಕುಮಾರಪಡೆ ತಾಲೂಕು ಉಪಾಧ್ಯಕ್ಷ ಲೋಕೇಶ್ ಸಾಧುಗೊನಹಳ್ಳಿ, ರಾಜೇಶ್, ಪ್ರವೀಣ್, ಅನಿಲ್, ಶಿವಣ್ಣ, ಗಣೇಶ್, ಸಂದೀಪ್, ಸುದೀಪ್, ನಿತಿನ್, ಪ್ರತಾಪ್, ಮಹೇಶ್ ಸೇರಿದಂತೆ ಉಪಸ್ಥಿತರಿದ್ದರು.

See also  ಕಾಲುವೆ ಕಾಮಗಾರಿಯಲ್ಲಿ ಕಳಪೆ: ರೈತಸಂಘ ಆರೋಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು