News Kannada
Sunday, December 10 2023
ಮಂಡ್ಯ

ಭಾರತೀನಗರ: ಮಂಡ್ಯದಲ್ಲಿ ಕೆಪಿಸಿಸಿ ಸದಸ್ಯನಿಂದ ಮಾದಪ್ಪನ ಯಾತ್ರೆ

yatre
Photo Credit : By Author

ಭಾರತೀನಗರ: ಕೆ.ಎಂ.ದೊಡ್ಡಿಯಲ್ಲಿ ಕೆಪಿಸಿಸಿ ಸದಸ್ಯ ಎಸ್.ಗುರುಚರಣ್ ಅವರ ನೇತೃತ್ವದಲ್ಲಿ ಕ್ಯಾತಘಟ್ಟ ಗ್ರಾಮಪಂಚಾಯಿತಿ ವ್ಯಾಪ್ತಿಯಿಂದ ಮಾದಪ್ಪನ ಯಾತ್ರೆಗೆ ತೆರಳಲಾಯಿತು.

ಯಾತ್ರಾ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ಕೆಪಿಸಿಸಿ ಸದಸ್ಯ ಎಸ್.ಗುರುಚರಣ್ ಅವರು ಮದ್ದೂರು ಕ್ಷೇತ್ರದಲ್ಲಿ ಬಹುತೇಕ ಪಕ್ಷೇತರ ಅಭ್ಯರ್ಥಿಗಳು ಇದುವರೆಗೆ  ಗೆದ್ದಿಲ್ಲ, ಮುಂದೆಯೂ ಗೆಲ್ಲುವುದು ಇಲ್ಲ, ಹಾಗಾಗಿ ಉದಯ್ ಬೆಂಬಲಿಗರು ಸಹ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದರು.

ಮದ್ದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠಗೊಂಡಿದೆ. ಹಾಗಾಗಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಆಕಾಂಕ್ಷಿತರು ಕಾಂಗ್ರೆಸ್ ಪಕ್ಷದಿಂದ  ಟಿಕೆಟ್ ಕೇಳುವುದು ಸಹಜ. ಹಾಗಂತ ಕೇಳಿದವರಿಗೆಲ್ಲಾ ಟಿಕೆಟ್ ನೀಡಲು ಹೈಕಮಾಂಡ್ ಸಿದ್ದವಿಲ್ಲ. ಕಾಂಗ್ರೆಸ್‌ನಲ್ಲಿ ತನ್ನದೆಯಾದ ಸಿದ್ಧಾಂತಗಳಿವೆ. ಸ್ಪರ್ಧಾಳುಗಳು ಕ್ಷೇತ್ರದಲ್ಲಿ ಹಾಗೂ ಪಕ್ಷದಲ್ಲಿ ಹೇಗೆ ಕೆಲಸ ನಿರ್ವಹಿಸುತ್ತಿದ್ದಾರೆ, ಸಂಘಟನೆಯಲ್ಲಿ ತೊಡಗಿದ್ದಾರಾ ಎಂಬಿತ್ಯಾಧಿಗಳ ಮಾಹಿತಿಗಳನ್ನು ಪಡೆಯುತ್ತಾರೆಂದು ವಿವರಿಸಿದರು.

ಕದಲೂರು ಉದಯ್ ಅವರು ಕಾಂಗ್ರೆಸ್ ಪಕ್ಷದಿಂದ ಸದಸ್ಯತ್ವವನ್ನೇ ಪಡೆದುಕೊಂಡಿಲ್ಲ. ಕದಲೂರು ಉದಯ್ ಅವರು ಕಾಂಗ್ರೆಸ್‌ನಿಂದ  ಸ್ಪರ್ಧಿಸುತ್ತೇನೆ ಟಿಕೆಟ್ ಕೊಡಿ ಎಂದು ಎಲ್ಲೂ ಕೇಳಿಲ್ಲ, ಅವರ ಬೆಂಬಲಿಗರು ಕಾಂಗ್ರೆಸ್‌ನಿಂದ ಟಿಕೆಟ್ ಕೇಳುತ್ತಿದ್ದಾರೆಯೇ ಹೊರತು ಉದಯ್ ಅವರು ಕೇಳಿಲ್ಲ. ಇಂತಹ ಊಹಪೋಹಗಳಿಗೆ ಕಿವಿಕೊಡುವುದು ಬೇಡ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬೂತ್  ಮಟ್ಟದಿಂದ ಸಂಘಟನೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇವರಿಬ್ಬರ ನಾಯಕರ ನೇತೃತ್ವದಲ್ಲಿ ಪ್ರವಾಸ ಕೈಗೊಂಡು ಮದ್ದೂರು-ಭಾರತೀನಗರದಲ್ಲಿ ಬೃಹತ್ ಸಭೆಯನ್ನು ನಡೆಸಲಾಗುವುದು ಎಂದರು.

ವಿಧಾನ ಪರಿಷತ್ ಸದಸ್ಯರಾದ ಮಧುಮಾದೇಗೌಡರು, ದಿನೇಶ್‌ಗೂಳಿಗೌಡ ಅವರು ಸಂಘಟನೆಯಲ್ಲಿ ನನಗೆ ಶಕ್ತಿ ತುಂಬಿದ್ದಾರೆ. ಕಾರ್ಯಕರ್ತರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ ಎಂದರು.

ಕ್ಷೇತ್ರದ ಟಿಕೆಟ್  ಗಾಗಿ ನಾನು ಒಳಗೊಂಡಂತೆ ಮೂರು ಜನರು ಮಾತ್ರ ಅರ್ಜಿಸಲ್ಲಿಸಿದ್ದಾರೆ. ನಮ್ಮ 3ಜನರಲ್ಲಿ ಒಬ್ಬರನ್ನು ಪರಿಗಣಿಸಿ ಟಿಕೇಟ್ ನೀಡುತ್ತಾರೆ. ಹೈಕಮಾಂಡ್ ಯಾರು ಕೆಲಸ ನಿರ್ವಹಿಸುತ್ತಿದ್ದಾರೆ ಅವರಿಗೆ ಮಾತ್ರ ಮಣೆಹಾಕುತ್ತಾರೆಯೇ ಹೊರತು ಯಾರೋ ಟಿಕೇಟ್ ಕೇಳಿದಾಕ್ಷಣ ಕೊಡಲು ಸಿದ್ದವಿರಲ್ಲ ಎಂದರು.

ಇದೇ ವೇಳೆ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಸಂದರ್ಶ, ಮನ್ಮುಲ್ ಮಾಜಿ ನಿರ್ದೇಶಕ ಎ.ಸಿ.ಸತೀಶ್, ಮಣಿಗೆರೆ ರಾಮಚಂದ್ರೇಗೌಡ, ಮುಖಂಡರಾದ ತೊರೆಚಾಕನಹಳ್ಳಿ ಕುಮಾರ್, ರಾಜು, ಕೆಂಪೇಗೌಡ, ಬೊಮ್ಮನದೊಡ್ಡಿ ಬಸವಲಿಂಗ, ಮಠದದೊಡ್ಡಿ ಸತೀಶ್, ಮರಿಸ್ವಾಮಿ,  ಪುಟ್ಟಸ್ವಾಮಿ, ಕಳ್ಳಿಮೆಳೆದೊಡ್ಡಿ ಶಶಿಧರ್, ರಾಘು, ಪೃಥ್ವಿ, ಅಣ್ಣೂರು ರಂಜು ಸೇರಿದಂತೆ ಹಲವರಿದ್ದರು.

See also  ಬಂಟ್ವಾಳ: ಸಾರ್ವಜನಿಕ ಸ್ಥಳದಲ್ಲಿ ನಿಷೇದಿತ ಮಾದಕ ದ್ರವ್ಯ ಸೇವನೆ, ವ್ಯಕ್ತಿಯೋರ್ವನ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು