News Kannada
Sunday, March 26 2023

ಸಮುದಾಯ

ಕೆ.ಆರ್.ಪೇಟೆ: ಆನೆಗೊಳಮ್ಮ ದೇವಾಲಯದ ಕಳಸ ಪ್ರತಿಷ್ಠಾಪನಾ ಮಹೋತ್ಸವ

K.R. Pet: Kalasa Pratishthapana Mahotsava of Anegolamma Temple
Photo Credit : By Author

ಕೆ.ಆರ್.ಪೇಟೆ: ಆನೆಗೊಳಮ್ಮ ದೇವಿಯ ನೂತನ ದೇವಾಲಯದ ಉದ್ಘಾಟನೆ ಮತ್ತು ಕಳಸ ಪ್ರತಿಷ್ಠಾಪನೆಯು ಸಡಗರ ಸಂಭ್ರಮದಿಂದ ಆನೆಗೊಳ ಗ್ರಾಮಸ್ಥರ ಸಮ್ಮುಖದಲ್ಲಿ ಮೂರುದಿನಗಳ ಕಾಲ ನಡೆಯಿತು.

ಲಕ್ಷ್ಮಿದೇವಿ ದೇವತೆಯನ್ನು ಆನೆಗೊಳ ಗ್ರಾಮಸ್ಥರು ತಮ್ಮ ಗ್ರಾಮ ದೇವತೆಯಾಗಿ ಪೂಜಿಸುತ್ತಿದ್ದು, ನಂತರದಲ್ಲಿ ಆನೆಗೊಳಮ್ಮ ದೇವಿ ಎಂದು ಕರೆದು ಪೂಜಿಸುತ್ತಿದ್ದರು. ಆದರೆ ಗ್ರಾಮದಲ್ಲಿ ಇದುವರೆಗೂ ಗ್ರಾಮ ದೇವತೆಯ ದೇವಾಲಯ ಇಲ್ಲದನ್ನು ಗ್ರಾಮಸ್ಥರು ಸೇರಿ ಚರ್ಚಿಸಿ ನಂತರ ದೇವಾಲಯ ನಿರ್ಮಾಣ ಮಾಡಲು ಆರು ತಿಂಗಳ ಹಿಂದೆ ಸಂಕಲ್ಪಗೊಂಡಿದ್ದರು. ಇದರ ಪ್ರೇರೇಪಣೆಯಂತೆ ಆನೆಗೊಳ ಗ್ರಾಮದಲ್ಲಿ ಭವ್ಯವಾದ ನೂತನ ದೇವಾಲಯ ಮತ್ತು ಉತ್ಸವ ಮೂರ್ತಿಯ ಪ್ರತಿಷ್ಠಾಪನೆಯು ಹಿಂದೂ ಧಾರ್ಮಿಕ ವಿಧಿ ವಿಧಾನಗಳಂತೆ ಮೂರು ದಿನಗಳ ಕಾಲ ನಡೆಯಿತು.

ರಾಮನಾಥಪುರ ಗ್ರಾಮದಲ್ಲಿ ಹರಿಯುವ ನಾಡಿನ ಜೀವನದಿ ಕಾವೇರಿಯಿಂದ ಆನೆಗೊಳ ಗ್ರಾಮಸ್ಥರು ಪ್ರಾಣಪ್ರತಿಷ್ಠಾಪನೆಗಾಗಿ ಕಾಲ್ನಡಿಗೆಯಲ್ಲಿ ಆನೆಗೊಳಮ್ಮ ದೇವಿಯನ್ನು ನದಿಗೆ ತಂದು ಧಾರ್ಮಿಕ ವಿಧಾನಗೊಳೊಂದಿಗೆ ಪ್ರಾಣಪ್ರತಿಷ್ಠಾಪಿಸಿ ಮೂಲದೇವರಿಗೆ ಜಲಾಭಿಷೇಕ ಮುಂತಾದ ಅಭಿಷೇಕಗಳೊಂದಿಗೆ ಮೂಲ ದೇವಿಯ ಪ್ರಾಣಪ್ರತಿಷ್ಠಾಪಿಸಲು ಗ್ರಾಮದ ಮಹಿಳೆಯರು ಮತ್ತು ದೇವಿಯ ಒಕ್ಕಲುತನದ ಕುಟುಂಬದ ಮಹಿಳೆಯರು 1001 ಪೂರ್ಣಕುಂಭ ಕಳಸವನ್ನು ತಂದು ಗ್ರಾಮದ ರಾಜಬೀದಿಗಳಲ್ಲಿ ಜಾನಪದ ಕಲಾತಂಡಗಳ ಜೊತೆ ಮಂಗಳವಾದಗಳೊಡನೆ ದೇವಾಲಯದ ಆವರಣಕ್ಕೆ ಪೂರ್ಣಕುಂಭ ಕಳಸವನ್ನು ಪ್ರತಿಷ್ಠಾಪಿಸಲಾಯಿತು. ನಂತರ ದೇವಾಲಯದ ಕಳಸ ಪ್ರತಿಷ್ಠಾಪನೆಯನ್ನು ಶ್ರೀಮದ್ ರಂಭಪುರಿ ಶಾಖಾಪುರವರ್ಗ, ಹಿರೇಮಠ ನುಗ್ಗೇಹಳ್ಳಿ ಮಠದ ಸ್ವಾಮೀಜಿಗಳಾದ ಷ||ಬ್ರ||ಡಾ.ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ನೇರವೇರಿಸಿದರು.

ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಮೂರುಗಳ ಕಾಲ ನಡೆದ ಧಾರ್ಮಿಕ ವಿಧಿಗಳು, ಜನಪದ ಕಲಾನೃತ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಬಾಣಬಿರುಸುಗಳ ವೈಭವವೂ ಮೈಸೂರು ದಸರಾ ವೈಭವವನ್ನು ನೆನಪಿಸುವಂತ್ತಿತ್ತು. ದೇವಾಲಯಕ್ಕೆ ಆಗಮಿಸಿದ ಭಕ್ತಾಧಿಗಳಿಗೆ ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳು ತೊಂದರೆಯಾಗದಂತೆ ಗ್ರಾಮಸ್ಥರು ಜಾಗ್ರತೆವಹಿಸಿದ್ದು ಮಾದರಿಯಾಗಿತ್ತು. ಮೂರು ದಿನಗಳ ಕಾಲ ದೇವಾಲಯಕ್ಕೆ ಆಗಮಿಸಿದ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಭಕ್ತಾಧಿಗಳಿಗೆ ಹಾಗೂ ನಾಗರೀಕರಿಗೆ ಉಚಿತ ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಿದ್ದರು.

See also  ಮಂಗಳೂರು: ಸಂತ ಆಂತೋನಿಯವರ ವಾರ್ಷಿಕ ಹಬ್ಬ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು