News Kannada
Tuesday, June 06 2023
ಮಂಡ್ಯ

ನನ್ನನ್ನು ನಾಶ ಮಾಡುವ ಕಾಂಗ್ರೆಸ್‌ ಕನಸು ಈಡೇರಲ್ಲ, ಹೆದ್ದಾರಿ ಉದ್ಘಾಟಿಸಿ ಪ್ರಧಾನಿ ವಾಗ್ದಾಳಿ

Mandya: Congress' dream of destroying me will not be fulfilled, says PM Modi after inaugurating highway
Photo Credit : IANS

ಮಂಡ್ಯ: ಕಾಂಗ್ರೆಸ್‌ ಪಕ್ಷ ಮೋದಿ ಸಮಾಧಿ ಮಾಡುವ ಕನಸು ಕಾಣುತ್ತಿದೆ. ಆದರೆ ನಾನು ಹೆದ್ದಾರಿ ಸೇರಿದಂತೆ ದೇಶದ ಅಭಿವೃದ್ಧಿಯಲ್ಲಿ ತೊಡಗಿದ್ದೇನೆ. ದೇಶದ ಕೋಟಿ ಕೋಟಿ ಜನರ ಆಶೀರ್ವಾದವೇ ನನಗೆ ಶ್ರೀರಕ್ಷೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮಂಡ್ಯದಲ್ಲಿ ಎಕ್ಸ್‌ಪ್ರೆಸ್‌ ವೇ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಅಭಿವೃದ್ಧಿಗೆ ಕೃಷ್ಣರಾಜ ಒಡೆಯರ್‌ ಮತ್ತು ವಿಶ್ವೇಶ್ವರಯ್ಯ ಅವರ ಕೊಡುಗೆ ಮರೆಯಲಾಗದು. ಸಾಗರ್‌ ಮಾಲಾ ಭಾರತ್‌ ಮಾಲಾ ಯೋಜನೆಯಿಂದ ಕರ್ನಾಟಕ ಅಭಿವೃದ್ಧಿ ಪಥದಲ್ಲಿದೆ. ಆದರೆ ಕಾಂಗ್ರೆಸ್‌ ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡಿತು. ಕಾಂಗ್ರೆಸ್‌ ಆಡಳಿತ ಅವಧಿಯಲ್ಲಿ ಬಡವರು ಪ್ರತಿ ಸವಲತ್ತು ಪಡೆಯಲು ಕಷ್ಟಪಡಬೇಕಾದ ಸ್ಥಿತಿಯಿತ್ತು. ಇದೀಗ ಪ್ರತಿ ಸೌಲಭ್ಯಗಳು ಜನರ ಬಳಿಗೆ ತಲುಪಿವೆ ಎಂದರು.

ಭದ್ರ ಮೇಲ್ದಂಡೆ ಯೋಜನೆಗೆ ನಮ್ಮ ಸರ್ಕಾರ 5300 ಕೋಟಿ ರೂ. ಘೋಷಿಸಿದೆ. ಕಿಸಾನ್‌ ಸಮ್ಮಾನ್‌ ಮೂಲಕ ರೈತರ ಕಲ್ಯಾಣ ನಡೆಯುತ್ತಿದೆ ಎಂದರು. ರಕ್ಷಣಾ ವಲಯದಲ್ಲಿಯೂ ಕುಂಠಿತವಾಗಿದ್ದ ಪ್ರಗತಿ ಉನ್ನತ ಮಟ್ಟಕ್ಕೇ ಏರಿದೆ ಎಂದರು.

See also  100 ಕೋಟಿ ಕೋವಿಡ್ ಲಸಿಕೆ ದಾಖಲೆ: ಬಿಜೆಪಿ ಜಿಲ್ಲಾಧ್ಯಕ್ಷರ ಶ್ಲಾಘನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು