News Kannada
Wednesday, October 04 2023
ಮೈಸೂರು

ಗುಂಡ್ಲುಪೇಟೆ ಬಳಿ ಬೈಕ್ ಗೆ ಟಿಪ್ಪರ್ ಡಿಕ್ಕಿ:ಸವಾರ ಸಾವು

GUNDLUPETE 1
Photo Credit :

ಗುಂಡ್ಲುಪೇಟೆ: ಟಿಪ್ಪರ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಮೈಸೂರು- ಊಟಿ ರಾಷ್ಟೀಯ ಹೆದ್ದಾರಿಯ ಹಳ್ಳದಮಾದಳ್ಳಿ ಗೇಟ್ ಸಮೀಪ ನಡೆದಿದೆ.

ನಂಜನಗೂಡು ತಾಲ್ಲೂಕಿನ ಮಲ್ಲಹಳ್ಳಿ ಗ್ರಾಮದ ನಿವಾಸಿ ಮುದ್ದರಾಜಪ್ಪ(55) ಮೃತಪಟ್ಟ ದುರ್ದೈವಿ. ಇವರು ತಮ್ಮ (ಕೆಎ 09 ಜೆಇ 7352) ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.

ಮೃತ ಮುದ್ದರಾಜಪ್ಪ ಅವರು ಮಗಳನ್ನು ಕಣಗಳ್ಳಿ ಗ್ರಾಮಕ್ಕೆ ಕೊಟ್ಟು ಮದುವೆ ಮಾಡಿದ್ದು ಮೊಮ್ಮಗುವನ್ನು ನೋಡಲೆಂದು ತೆರಳುತ್ತಿದ್ದ ವೇಳೆ  ಮೈಸೂರು- ಊಟಿ ರಾಷ್ಟೀಯ ಹೆದ್ದಾರಿಯ ಹಳ್ಳದಮಾದಳ್ಳಿ ಗೇಟ್ ಸಮೀಪ

ಟಿಪ್ಪರ್ (ಕೆಎ01ಎಬಿ 1196) ಬೈಕ್ ಗೆ  ಡಿಕ್ಕಿಹೊಡೆದಿದೆ ಪರಿಣಾಮ ಮುದ್ದರಾಜಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಅಪಘಾತ ಸಂಭವಿಸುತ್ತಿದ್ದಂತೆ ಜಮಾಯಿಸಿದ ಸಾರ್ವಜನಿಕರು ಟಿಪ್ಪರ್ ಅತಿ ವೇಗ ಚಾಲನೆ ವಿರುದ್ದ ಆಕ್ರೋಶ ಹೊರಹಾಕಿದರು. ಅಲ್ಲದೆ ಪೊಲೀಸರ ವಿರುದ್ದ ತಿರುಗಿ ಬಿದ್ದರು ಅಧಿಕ ಭಾರ, ಅತಿ ವೇಗ ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಿದ್ದರೂ ಪೊಲೀಸರು ಟಿಪ್ಪರ್ ಗಳ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಸ್ಥಳಕ್ಕೆ ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ತಹಶೀಲ್ದಾರ್ ರವಿಶಂಕರ್, ಸರ್ಕಲ್ ಇನ್ಸ್ ಪೆಕ್ಟರ್ ಗಳಾದ ಮಹದೇವಸ್ವಾಮಿ, ಲಕ್ಷ್ಮೀಕಾಂತ್, ಸಬ್ ಇನ್ಸ್ ಪೆಕ್ಟರ್ ರೆಹಾನಾ ಬೇಗಂ, ಮಂಜುನಾಥ್  ಭೇಟಿ ನೀಡಿ ಕ್ರಮ ಮುಂದಿನ ಕೈಗೊಂಡಿದ್ದಾರೆ.

See also  ಪೆಟ್ರೋಲ್ ಬಂಕ್ ಗೆ ನರೆಂದ್ರ ಮೋದಿಯವರ ಹೆಸರಿಟ್ಟು 50ರೂ.ಗೆ ಪೆಟ್ರೋಲ್ ನೀಡಲಿ; ಡಾ.ಹೆಚ್.ಸಿ.ಮಹದೇವಪ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು