News Karnataka Kannada
Saturday, April 27 2024
ಮೈಸೂರು

ಉಸ್ತುವಾರಿಯಾಗಿರಬೇಕೆಂಬ ಹಠ ಇಲ್ಲ: ಎಸ್.ಟಿ.ಸೋಮಶೇಖರ್

S T Somshekar
Photo Credit :

ಮೈಸೂರು: ಸಂಪುಟ ಪುನರ್ ರಚನೆ, ಸಂಪುಟ ವಿಸ್ತರಣೆ ವಿಚಾರ ನನಗೆ ಗೊತ್ತಿಲ್ಲ. ಮೈಸೂರು ಜಿಲ್ಲಾ ಉಸ್ತುವಾರಿಯಾಗಿ ಇರಬೇಕು ಎಂಬ ಹಠ ನನಗಿಲ್ಲ ಎಂದು ಬಯಸಿಲ್ಲ. ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಮತ್ತು ಪುನರ್ ರಚನೆ ಬಗ್ಗೆ ಸಿಎಂ ಅವರೇ ಎಲ್ಲವನ್ನೂ ತಿಳಿಸಬೇಕು ಎಂದರು.

ಮೈಸೂರು ಜಿಲ್ಲಾ ಉಸ್ತುವಾರಿಗೆ ಪೈಪೋಟಿ ಹೆಚ್ಚಾಗಿದ್ದರೆ ಸಂತೋಷ. ನಾನೇ ಇಲ್ಲಿ ಸದಾ ಇರಬೇಕು ಎಂದು ಬಯಸಿಲ್ಲ. ನನಗೆ ಮಾತ್ರ ಉಸ್ತುವಾರಿ ಸ್ಥಾನ ಇರಬೇಕೆಂದು ಪಟ್ಟು ಕೂಡ ಹಿಡಿದಿಲ್ಲ. ಬೇರೆಯವರಿಗೆ ಈ ಸ್ಥಾನ ಕೊಟ್ಟರು ಸಂತೋಷ. ಯಡಿಯೂರಪ್ಪ ಅವರು ಈ ಸ್ಥಾನ ಕೊಟ್ಟಿದ್ದರು. ಬೊಮ್ಮಾಯಿ ಅವರು ಕೂಡ ಈ ಮುಂದುವರಿಸಿzರೆ. ಕೊಟ್ಟ ಜವಾಬ್ದಾರಿ ನಿರ್ವಹಿಸಿದ್ದೇನೆ. ಬದಲಾವಣೆ ಏನಿದ್ದರೂ ಅದು ಸಿಎಂ ತೀರ್ಮಾನ ಎಂದು ಹೇಳಿದರು.

ಸಾಮಾನ್ಯವಾಗಿ ಹೊಸದಾಗಿ ಅಭಿವೃದ್ಧಿ ಯೋಜನೆಗಳನ್ನು ಘೋಷಣೆ ಮಾಡಿದಾಗ ಪರ, ವಿರೋಧ ಇರುತ್ತದೆ. ಚಾಮುಂಡಿಬೆಟ್ಟಕ್ಕೆ ರೋಪ್ ವೇ ವಿಚಾರವಾಗಿ ಪ್ರಮೋದಾದೇವಿ ಹಾಗೂ ಇತರರ ಹೇಳಿಕೆಗಳನ್ನು ಗಮನಿಸಿದ್ದೇವೆ. ಎಲ್ಲವನ್ನೂ ಮುಖ್ಯಮಂತ್ರಿ ಗಮನಕ್ಕೆ ತಂದು ಚರ್ಚಿಸಲಾಗುವುದು ಎಂದರು.

ದೇವರಾಜ ಮಾರುಕಟ್ಟೆ ಮರು ನಿರ್ಮಾಣ ವಿಚಾರ ಶಾಸಕ ನಾಗೇಂದ್ರ ಅವರು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದಾರೆ. ಸಚಿವ ಸಂಪುಟದ ಬಗ್ಗೆ ಮುಖ್ಯಮಂತ್ರಿ ಉತ್ತರಿಸಲಿzರೆ. ಪಾಲಿಕೆ ಬಜೆಟ್ ಕುರಿತು ಪರಾಮರ್ಶಿಸಲಾಗುವುದು. ಮೇಯರ್, ಆಯುಕ್ತರ ಜೊತೆ ಮಾತುಕತೆ ನಡೆಸಿ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು