ಮೈಸೂರು: ಇಂಡಿಯನ್ ಫೆಡರೇಶನ್ ಆಫ್ ವರ್ಕಿಂಗ್ ಜರ್ನಲಿಸ್ಟ್ 73 ನೇ ಮಹಾ ಸಮಾವೇಶ ಅರಮನೆ ನಗರಿ ಮೈಸೂರಿನಲ್ಲಿ ಜುಲೈ 16 ಮತ್ತು 17 ರಂದು ನಡೆಯಲಿದೆ.
ರಾಷ್ಟ್ರೀಯ ಅಧ್ಯಕ್ಷ ಅವದೇಶ್ ಭಾರ್ಗವ್, ಮಾಜಿ ಅಧ್ಯಕ್ಷ ಶಂಕರ್ ಶರ್ಮ ಉಪಸ್ಥಿತಿಯಲ್ಲಿ ಬ್ರಹತ್ ಸಮಾವೇಶ ನಡೆಯುತ್ತಿದ್ದು, ಈ ಸಂಬಂಧ ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವೆಂಕಟೇಶ್ ಬೋವಿ ನೇತೃತ್ವದಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ಜೂ.8 ರಂದು ಬೆಂಗಳೂರಿನಲ್ಲಿ ಜರುಗಲಿದೆ.
ಈ ವೇಳೆ ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತನ ಅಭಿಯಾನ ಹಾಗೂ ಪ್ರಚಾರ ಅಭಿಯಾನದ ಕುರಿತು ಚರ್ಚೆಯೂ ನಡೆಯಲಿದೆ.
ಸಭೆಯಲ್ಲಿ ಪ್ರಮುಖವಾಗಿ ಕಾರ್ಯನಿರತ ಪತ್ರಕರ್ತರು ಸರ್ಕಾರದ ಸವಲತ್ತಿನಿಂದ ವಂಚಿತವಾಗುತ್ತಿರುವ ಕುರಿತು, ಭವಿಷ್ಯದ ಸವಾಲುಗಳು, ಅರ್ಹ ಫಲಾನುಭವಿ ಪತ್ರಕರ್ತರಿಗೆ ವಸತಿ ಯೋಜನೆ, ಅಕ್ರಿಡಿಟೇಶನ್ ಕಾರ್ಡ್ ದುರ್ಬಳಕೆ ಮುಂತಾದ ವಿಚಾರಗಳ ಕುರಿತಂತೆ ಚರ್ಚೆ ನಡೆಯಲಿದೆ.