ನಂಜನಗೂಡು: ಸುತ್ತೂರು ಶ್ರೀ ಕ್ಷೇತ್ರದಲ್ಲಿ ಶಿವರಾತ್ರಿಶ್ವರ ಜಾತ್ರೆಯು ಮಹಾಮಾರಿ ಕೊರೋನಾ ವೈರಸ್ ಹರಡುವ ಕಾರಣ ಸರಳವಾಗಿ ಭಾನುವಾರ ನಡೆಯಿತು. ಶ್ರೀಮಠದ ಅವರಣದಲ್ಲಿ ಬೆಳ್ಳಿ ರಥಕ್ಕೆ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ರವರು ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ 100 ರಿಂದ 150 ಮಠದ ಭಕ್ತಾಧಿಗಳು ಮಾತ್ರ ಜಾತ್ರೆಯಲ್ಲಿ ಪಾಲ್ಗೊಂಡಿದ್ದು ಬೆಳ್ಳಿರಥ ಶ್ರೀಮಠದ ಅವರಣದಲ್ಲಿ ಒಂದು ಗಂಟೆಗೆ ಸೀಮಿತವಾಗಿ ಒಂದು ಗಂಟೆ ಸಮಯದಲ್ಲಿ ದೇವಸ್ಥಾನ ಸುತ್ತ ಪ್ರದಕ್ಷಿಣೆ ಮಾಡಿ ಮಠದ ಒಳಗೆ ಶಿವರಾತ್ರಿಶ್ವರ ಮೂರ್ತಿಯನ್ನು ಮತ್ತೆ ಮೂಲ ಮಟ್ಟಕ್ಕೆ ತಲುಪಿಸಿದರು.
ಈ ಸಂದರ್ಭದಲ್ಲಿ ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಶ್ರೀಮಠದ ಗುರುಕುಲದ ಸ್ವಾಮಿಗಳು ಮಾತ್ರ ಆಗಮಿಸಿ ಜಾತ್ರೆಯನ್ನು ಸರಳವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಾಗೂ ಯಳಂದೂರು ತಾಲ್ಲೂಕು ದುಗ್ಗಟ್ಟಿ ಸುಂದರಮ್ಮ, ವೀರಭದ್ರಪ್ಪ ಅವರ ಪ್ರತಿಷ್ಠಾನದ ಸಹಯೋಗದಲ್ಲಿ ಚಾಮರಾಜನಗರ ಜಿಲ್ಲೆಯ ಪ್ರಗತಿಪರ ರೈತರು ಅತ್ಯುತ್ತಮವಾಗಿ ಬೆಳೆ ಬೆಳೆದ ರೈತರಿಗೆ ಪ್ರಶಸ್ತಿ ನೀಡಿ ಸುತ್ತೂರು ದೇಶೀಕೇಂದ್ರ ಸ್ವಾಮೀಜಿ ಅವರು ಸನ್ಮಾನಿಸಿದರು.
ಈ ವೇಳೆ ದುಗ್ಗಟ್ಟಿ ವೀರಭದ್ರಪ್ಪ ಗಂಗಾಧರಸ್ವಾಮಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಪ್ರಗತಿಪರ ರೈತರು ಹಾಜರಿದ್ದರು.
ಪ್ರತಿವರ್ಷವೂ ಸುತ್ತೂರು ಜಾತ್ರೆಗೆ ಲಕ್ಷಾಂತರ ಭಕ್ತರ ಮಂದಿಗಳು ಸಾವಿರಾರು ಕಿಲೋಮೀಟರ್ ಗಳಿಂದ ಸಾವಿರಾರು ಗ್ರಾಮಗಳಿಂದ, ವಿವಿಧ ಜಿಲ್ಲೆಗಳಿಂದ, ಅಲ್ಲದೆ ಹೊರ ದೇಶಗಳಿಂದಲೂ ಸುತ್ತೂರು ಜಾತ್ರೆಗೆ ಬಂದು ಒಂದು ವಾರ ಕಾಲ ದಿನನಿತ್ಯವೂ ಜನಪರ ಕಾರ್ಯಕ್ರಮವನ್ನು ನೋಡಿ ಸಂಭ್ರಮಿಸಿ ಅಲ್ಲದೆ ಶ್ರೀಮಠದ ಸಮೀಪವೂ ಕಪಿಲಾ ನದಿಯು ತುಂಬಿ ಹರಿಯುವುದನ್ನು ಕಣ್ತುಂಬಿಸಿಕೊಳ್ಳುತ್ತಿದ್ದರು.
ಜಾತ್ರೆಯಲ್ಲಿ ಪ್ರತಿದಿನವೂ ಲಕ್ಷಾಂತರ ಮಂದಿಗೆ ಅನ್ನದಾಸೋಹ, ಕೃಷಿ ಮೇಳ, ರಂಗೋಲಿ ಸ್ಪರ್ಧೆ, ಕುಸ್ತಿ ಪಂದ್ಯಾವಳಿ, ಕೃಷಿ ಮೇಳ, ವಸ್ತು ಪ್ರದರ್ಶನ, ಕ್ರೀಡಾಕೂಟ, ದನಗಳ ಜಾತ್ರೆ, ಕೆಸರುಗದ್ದೆ ಓಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಆರೋಗ್ಯ ಮೇಳ ನಡೆಯುತ್ತಿದ್ದವು. ಮಹಾಮಾರಿ ಕೊರೋನ ದಿಂದ ಸರಳವಾಗಿ ನಡೆದ ಈ ಬಾರಿಯ ಜಾತ್ರೆಯು ನಾಡಿನ ಲಕ್ಷಾಂತರ ಭಕ್ತಾಧಿಗಳಿಗೆ ನಿರಾಸೆ ಉಂಟು ಮಾಡಿದೆ.