News Kannada
Saturday, April 01 2023

ಮೈಸೂರು

ಸತ್ತ ವ್ಯಕ್ತಿಯ ಆಸ್ತಿ ಕಬಳಿಕೆ ಯತ್ನ ; ಗ್ರಾಮ ಸಹಾಯಕ ಸೇರಿ ನಾಲ್ವರ ಬಂಧನ

Photo Credit :

 

ಮೈಸೂರು: ಸತ್ತ ವ್ಯಕ್ತಿಯ ಹೆಸರಿನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನನ್ನು ನಕಲಿ ದಾನಪತ್ರ ಸೃಷ್ಟಿಸಿ ಲಪಟಾಯಿಸಲು ಯತ್ನಿಸಿದ ನಾಲ್ವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೈಸೂರು ತಾಲ್ಲೂಕು ರಮ್ಮನಹಳ್ಳಿ ಗ್ರಾಮ ಸಹಾಯಕ ಸಿದ್ದಯ್ಯ, ಚಿನ್ನಸ್ವಾಮಿ, ಸುಶೀಲಮ್ಮ, ಪತ್ರಬರಹಗಾರ ಮೆಲ್ಲಹಳ್ಳಿ ಮಂಚಪ್ಪ ಬಂಧಿತರು.
‘ತಾಲ್ಲೂಕು ಕಚೇರಿಯಲ್ಲಿ ಖಾತೆ ಬದಲಾವಣೆ ಮಾಡಿಸುವ ಸಂದರ್ಭದಲ್ಲಿ ಗ್ರಾಮದ ಮಂಜುನಾಥ್‌, ಸಾಮಾಜಿಕ ಕಾರ್ಯಕರ್ತರಾದ ಬಿ.ಎನ್.ನಾಗೇಂದ್ರ ಅವರು ಅಕ್ರಮದ ಬಗ್ಗೆ ಬಹಿರಂಗಪಡಿಸಿ ಕ್ರಮಕ್ಕೆ ದೂರು ನೀಡಿದ್ದರು. ಈ ಸಂಬಂಧ ನಾಲ್ವರನ್ನು ಗುರುವಾರ (ಆ.19) ಬಂಧಿಸಲಾಗಿದೆ’ ಎಂದು ನರಸಿಂಹರಾಜ ಠಾಣೆ ಪೊಲೀಸರು ತಿಳಿಸಿದರು. ‘ಮೈಸೂರು ತಾಲ್ಲೂಕು ಕಸಬಾ ಹೋಬಳಿ ಕೆಸರೆ ಗ್ರಾಮ ಸರ್ವೆ ನಂ.244/2 ರ 4 ನಾಲ್ಕು ಎಕರೆ 4 ಗುಂಟೆ ಜಮೀನು ಎನ್.ಆರ್.ಮೊಹಲ್ಲಾದ ಗಾಣಿಗರ ಬೀದಿ ನಿವಾಸಿ ಎ.ಚೆಲುವರಾಜ್ ಅವರಿಗೆ ಸೇರಿತ್ತು. ಪಾಳು ಬಿದ್ದಿರುವುದನ್ನು ಗಮನಿಸಿದ ನಾಲ್ವರು ಭೂಮಿ ಕಬಳಿಸಲು ಯತ್ನಿಸಿದ್ದರು. ಎ.ಚೆಲುವರಾಜ್ ಅವರು 1986ರಲ್ಲಿ ಮೃತಪಟ್ಟಿದ್ದಾರೆ. ಇವರ ಹೆಸರಿನ ಜಮೀನನ್ನು ಕಬಳಿಸಲು ಆ.ಸೆಲ್ವರಾಜ್ ಎಂದು ಹೆಸರು ಬದಲಾಯಿಸಿ ತಮ್ಮ ಮಗಳು ಲಕ್ಷ್ಮಮ್ಮ ಎಂಬುವರಿಗೆ ದಾನಪತ್ರ ಮಾಡಿದಂತೆ 2019 ರಲ್ಲಿ ದಾಖಲೆ ಸೃಷ್ಟಿಮಾಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

See also  ಮೈಸೂರು ನಗರದಲ್ಲಿ ಶೇ. 100 ರಷ್ಟು ಲಸಿಕೆ ಅಭಿಯಾನ ಯಶಸ್ವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು