News Kannada
Thursday, September 28 2023
ಮೈಸೂರು

ಮಳೆಗಾಗಿ ಪ್ರಾರ್ಥಿಸಿ ಕಪ್ಪೆ ಮದುವೆ ಮಾಡಿದ ಗ್ರಾಮಸ್ಥರು

mysuru 1 1
Photo Credit : By Author

ಮೈಸೂರು: ಮಳೆಗಾಗಿ ಪ್ರಾರ್ಥಿಸಿ ಕಪ್ಪೆ ಮದುವೆ ಮಾಡಿಸಿದ ನಿವಾಸಿಗಳು ಸಂಗ್ರಹಿಸಿದ ದವಸ-ಧಾನ್ಯ ಹಾಗೂ ಹಣದಿಂದ ಅಡುಗೆ ಮಾಡಿ, ಸವಿದು ಸಂಭ್ರಮಿಸಿದರು.

ಎಚ್.ಡಿ.ಕೋಟೆ, ಸರಗೂರು ತಾಲೂಕಿನಲ್ಲಿ ಕಳೆದೊಂದು ತಿಂಗಳಿಂದ ಮಳೆ ಅಭಾವದ ಹಿನ್ನೆಲೆಯಲ್ಲಿ ಈಗಾಗಲೇ ಬಿತ್ತನೆ ಮಾಡಲಾದ ವಾಣಿಜ್ಯ ಬೆಳೆಗಳಾದ ಹತ್ತಿ, ಮಕ್ಕೆಜೋಳ, ಅವರೆ ಸೇರಿದಂತೆ ಇನ್ನಿತರ ಬೆಳೆಗಳು ಬಿಸಿಲಿನಿಂದ ಬಾಡಿ ಹಾಳಾಗುತ್ತಿದ್ದು ಇದರಿಂದ ಮನನೊಂದ ಯರಹಳ್ಳಿ ಕಾವಲ್‌ನ ಗ್ರಾಮಸ್ಥರು ಕಪ್ಪೆ ಮದುವೆ ಮಾಡಿಸಿ, ಮಳೆರಾಯನಲ್ಲಿ ಮಳೆಗಾಗಿ ಪ್ರಾರ್ಥಿಸಿದ್ದಾರೆ.

ಗ್ರಾಮದ ಹೊಸಕೆರೆ ಆವರಣದಲ್ಲಿ ಜಮಾಯಿಸಿದ್ದ ಗ್ರಾಮಸ್ಥರು ಕಪ್ಪೆಗಳ ಮದುವೆ ಮಾಡಿಸಿದ್ದಾರೆ. ನಂತರ ಮೆರವಣಿಗೆ ಮಾಡಿಸಿ, ದವಸ-ಧಾನ್ಯಗಳನ್ನು ಸಂಗ್ರಹಿಸಿದ್ದಾರೆ. ನಂತರ ಕಪ್ಪೆಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಕೆರೆಗೆ ಬಿಟ್ಟಿದ್ದಾರೆ. ಸಂಗ್ರಹವಾದ ಆಹಾರ ಪದಾರ್ಥಗಳಿಂದ ಅಡುಗೆ ಮಾಡಿಕೊಂಡು ಮದುವೆ ಊಟೋಪಚಾರ ಮಾಡಿದ್ದಾರೆ. ಇದಲ್ಲದೆ ಕೆರೆಯ ಬಳಿಗೆ ಬಂದವರಿಗೆಲ್ಲರಿಗೂ ಮದುವೆ ಊಟವನ್ನು ಬಡಿಸಿದ್ದಾರೆ.

ಕಪ್ಪೆ ಮದುವೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಂಭ್ರಮ ಮನೆ ಮಾಡಿತ್ತು. ಮಳೆ ಬಾರದೆ ಬೆಳೆಗಳು ಹಾಳಾಗುತ್ತಿವೆ ಎಂಬ ಕೊರಗು ಒಂದೆಡೆಯಾದರೆ ಕಪ್ಪೆ ಮದುವೆ ಮಾಡಿದರೆ ಖಂಡಿತಾ ಮಳೆ ಬರಲಿದೆ ಎಂಬ ನಂಬಿಕೆಯಲ್ಲಿ ಜನರು ಸಂಭ್ರಮಪಟ್ಟರು. ಗ್ರಾಮದ ಯುವಕರು, ಮಹಿಳೆಯರು, ಮುಖಂಡರು ಇದ್ದರು.

See also  ಮೈಸೂರು: ಡಿವೈಡರ್​ನ ವಿದ್ಯುತ್​ ಕಂಬಕ್ಕೆ ಕಾರು ಡಿಕ್ಕಿ ,ವೈದ್ಯ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು