News Kannada
Wednesday, September 27 2023
ಮೈಸೂರು

ಮೈಸೂರು: ಬಾಲ ಕಾರ್ಮಿಕ ವಿರೋಧಿ ಜಾಥಾ ಹಾಗೂ ಕಿರು ಬೀದಿ ನಾಟಕ ಪ್ರದರ್ಶನ

Untitled 2 Recovered Recovered Recovered 61
Photo Credit :

ಮೈಸೂರು: ಎನ್. ಆರ್. ಮೊಹಲ್ಲಾದಲ್ಲಿರುವ ಮೆಸ್ಕೋ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸಮೀಪದ ಬಡಾಮಕಾನ್ ನ ಸ್ಲಂ ಪ್ರದೇಶದಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧಿ ಜಾಥಾ ನಡೆಸಿ ಉಮರ್ ಶಾ ಮಸೀದಿಯ ಆವರಣದಲ್ಲಿ ಬಾಲಕಾರ್ಮಿಕ ಪದ್ಧತಿ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸುವ ಕಿರು ಬೀದಿ ನಾಟಕ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಕ್ಕಳಹಕ್ಕುಗಳ ಹೋರಾಟಗಾರರು ಮತ್ತು ಅಡ್ವೊಕೇಟ್ ಬಾಬುರಾಜ್ ರವರು ಬಾಲಕಾರ್ಮಿಕ ಪದ್ಧತಿ ಮೊದಲಿನಿಂದಲೂ ನಮ್ಮ ಸುತ್ತಮುತ್ತಲಿನಲ್ಲಿ ನಡೆದುಕೊಂಡು ಬಂದಿರುವ ದೊಡ್ಡ ಸಾಮಾಜಿಕ ಪಿಡುಗು. ಅಲ್ಲದೇ ಮಕ್ಕಳಿಗೆ ದೊರೆತಿರುವ ಸಂವಿಧಾನದ ಹಕ್ಕಿನ ಉಲ್ಲಂಘನೆಯಾಗಿದೆ.

ಮಕ್ಕಳ ಹಕ್ಕುಗಳು ನಮ್ಮ ಔದಾರ್ಯವಲ್ಲ. ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಮತ್ತು ಅವರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡಬೇಕು ಎಂದು ತಿಳಿ ಹೇಳಿದರು. ಇಂದಿನ ವಿಷಮ ಪರಿಸ್ಥಿತಿಯಲ್ಲಿ ನಾವು ಶಿಕ್ಷಣದ ಮೂಲಕ ಮಾತ್ರ ಮುಂದೆ ಬರಲುಸಾಧ್ಯಎಂದರು.

ಮೆಸ್ಕೋ ಐ.ಟಿ.ಐ ಪ್ರಾಂಶುಪಾಲರಾದ ಎಂ. ಕಲೀಂ ಅಹ್ಮದ್ ಮಾತನಾಡಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದರೆ ನಮ್ಮ ದೈನಂದಿನ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿದೆ ಹಾಗೂ ಸುತ್ತಲಿನ ಸಮಾಜದ ಪ್ರಮುಖರು ಕೂಡ ಈ ನಿಟ್ಟಿನಲ್ಲಿ ಯೋಚಿಸಬೇಕು. ಬಾಲಕಾರ್ಮಿಕ ಪದ್ಧತಿ ಕಾನೂನಿನ ಪ್ರಕಾರ ಅಪರಾಧವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯದರ್ಶಿ ಪ್ರೊ. ಶಬ್ಬೀರ್ ಮುಸ್ತಪಫಾ ವಹಿಸಿದ್ದರು. 

See also  ಸುರತ್ಕಲ್ ತಾತ್ಕಾಲಿಕ ಟೋಲ್ ಗೇಟ್ ತೆರವುಗೊಳಿಸಲು ಆಗ್ರಹ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು