News Kannada
Monday, December 11 2023
ಮೈಸೂರು

ಮೈಸೂರು: ಕಾಡಿನಲ್ಲಿದ್ದ ನವಿಲು ಸೆರೆಹಿಡಿಯುತ್ತಿದ್ದ ವ್ಯಕ್ತಿಯ ಬಂಧನ

Man arrested for capturing peacock in forest
Photo Credit : By Author

ಮೈಸೂರು: ಕಾಡಂಚಿನ ಗ್ರಾಮದಲ್ಲಿರುವ ನವಿಲುಗಳನ್ನು ಹಿಡಿದು ಅವುಗಳನ್ನು ಮನೆಯಲ್ಲಿ ತಂದಿಟ್ಟು ಸಾಕುತ್ತಿದ್ದ ಆರೋಪಿಯನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿರುವ ಘಟನೆ ಹುಣಸೂರು ತಾಲೂಕಿನ ಹನಗೂಡು ಹೋಬಳಿಯ ಕಾಮಗೌಡನ ಹಳ್ಳಿಯಲ್ಲಿ ನಡೆದಿದೆ.

ಕಾಮಗೌಡನ ಹಳ್ಳಿ ನಿವಾಸಿ ಮಂಜು ಎಂಬಾತನೇ ಬಂಧಿತ ಆರೋಪಿ. ಈತ ಈ ಹಿಂದಿನಿಂದಲೂ ಇದೇ ಕೃತ್ಯವನ್ನು ಮಾಡುತ್ತಾ ಬಂದಿದ್ದನು. ಆದರೆ ಈ ಬಗ್ಗೆ ಯಾವುದೇ ಸಂಶಯ ಬಂದಿರಲಿಲ್ಲ. ಈ ನಡುವೆ ಈತನ ಮನೆಯಲ್ಲಿ ನವಿಲೊಂದರ ಕಾಲನ್ನು ಕಟ್ಟಿ ಮನೆಯಲ್ಲಿಟ್ಟುಕೊಂಡಿರುವುದು ಬೆಳಕಿಗೆ ಬಂದಿತ್ತು. ಈತ ನವಿಲನ್ನು ಸಾಕಿ ಬಳಿಕ ಏನು ಮಾಡುತ್ತಿದ್ದನು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.

ನವಿಲು ಮನೆಯಲ್ಲಿ ಸಾಕಿರುವ ವಿಷಯ ತಿಳಿದ ಮೇರೆಗೆ ಅರಣ್ಯ ಸಂಚಾರಿ ದಳದ ಎಸ್ಐ ಲಕ್ಷ್ಮಿ ನೇತೃತ್ವದ ತಂಡ ದಾಳಿ ಮಾಡಿದ್ದು, ಈ ವೇಳೆ ಮನೆಯಲ್ಲಿ ನವಿಲಿನ ಕಾಲಿಗೆ ಹಗ್ಗಕಟ್ಟಿ ಇಟ್ಟುಕೊಂಡಿರುವುದು ಪತ್ತೆಯಾಗಿದೆ. ಹೀಗಾಗಿ ನವಿಲಿನ ಸಹಿತ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಆತನ ವಿರುದ್ಧ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಂಧನದ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಮೇರೆಗೆ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

See also  ಕೊಲೆಸ್ಟ್ರಾಲ್ ಹತೋಟಿಯಲ್ಲಿಡಲು ಕೆಲವು ಉತ್ತಮ ಆಹಾರ ಕ್ರಮಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು