News Kannada
Monday, October 02 2023
ಮೈಸೂರು

ಮೈಸೂರು:ನಾಗರಹೊಳೆ ಉದ್ಯಾನದಂಚಿನ ಗ್ರಾಮಗಳಲ್ಲಿ ಭಾರೀ ಮಳೆ

Mysuru: Heavy rains lash villages on the outskirts of Nagarahole Park
Photo Credit : By Author

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಹೊಂದಿಕೊಂಡಂತೆ ಕಾಡಂಚಿನ ಗ್ರಾಮಗಳಲ್ಲಿ ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದ ಹನಗೋಡು- ಪಂಚವಳಿ (ಹುಣಸೂರು- ಹನಗೋಡು ಪಿರಿಯಾಪಟ್ಟಣ ಮಾರ್ಗ) ಸಂಪರ್ಕದ ಹೆಬ್ಬಾಳ ಸೇತುವೆ ಮೇಲೆ ಮೂರು ಅಡಿಗೂ ಹೆಚ್ಚು ನೀರು ಹರಿದಿದ್ದು, ಬಸ್ ಸೇರಿದಂತೆ ಇತರೆ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದ್ದು, ಕೆಲವರ ಮನೆ ಕುಸಿದು ಬಿದ್ದು ಹಾನಿಯಾಗಿದೆ.

ಹನಗೋಡು ಹೋಬಳಿ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಾದ ಕಿಕ್ಕೇರಿಕಟ್ಟೆ, ಹೆಬ್ಬಾಳ, ನೇರಳಕುಪ್ಪೆ, ಉಡುವೇಪುರ,  ಕಚುವಿನಹಳ್ಳಿ, ಶೆಟ್ಟಹಳ್ಳಿ, ಕೆಜಿ ಹೆಬ್ಬನಕುಪ್ಪೆ, ಕಾಳಬೋಚನಹಳ್ಳಿ, ಬೆಕ್ಯಶೆಡ್, ಬಿಲ್ಲೇನಹೊಸಳ್ಳಿ, ಚಂದನಗಿರಿ ಗ್ರಾಮಗಳಲ್ಲಿ ಭಾರೀ ಮಳೆ ಸುರಿದಿದೆ.  ಇದರಿಂದ ಕಚುವಿನಹಳ್ಳಿಯ ಪಾರ್ವತಿಹೆಬ್ಬೂರಿಗೌಡ, ಉಡುವೇಪುರದ ಚಂದ್ರಶೇಖರ್ ರವರ ಮನೆ ಗೋಡೆ ಕುಸಿದು ಬಿದ್ದಿದೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ನೇರಳಕುಪ್ಪೆಯ ಹುಚ್ಚಮ್ಮಕೆಂಪೇಗೌಡರ ಮನೆ ಗೋಡೆ ಕೂಡ ಮಳೆಯಿಂದ ಶಿಥಿಲಗೊಂಡು ಬೀಳುವ ಹಂತ ತಲುಪಿದೆ.

ಹಗಲಿಡೀ ಬಿಸಿಲಿದ್ದರೂ ಸಂಜೆಯಾಗುತ್ತಿದ್ದಂತೆಯೇ ದಿಢೀರ್ ಮಳೆಯಾಗಿದ್ದು ಇದರಿಂದ ಸುತ್ತಮುತ್ತಲಿನ ಹಳ್ಳಕೊಳ್ಳಗಳು ತುಂಬಿ ಹರಿದಿದೆ. ತಗ್ಗು ಪ್ರದೇಶದಲ್ಲಿರುವ ಜಮೀನಿನಲ್ಲಿ ನೀರು ನಿಂತಿದ್ದು ಇದರಿಂದ ತಂಬಾಕು, ಅವರೆ, ಹೂವಿನ ಬೆಳೆಗಳಿಗೆ ಹಾನಿಯಾಗುತ್ತಿದ್ದು, ರೈತರು ಆತಂಕ ಪಡುವಂತಾಗಿದೆ.

See also  ಸಿದ್ಧಗಂಗಾ ಶ್ರೀಗಳ ದಾಸೋಹ ಜಗತ್ತಿಗೆ ಮಾದರಿ; ಹೇಮಂತ್ ಕುಮಾರ್ ಗೌಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು