News Kannada
Wednesday, November 29 2023
ಮೈಸೂರು

ಮೈಸೂರು: ಮೋದಿ@20 ಕೃತಿ ಕುರಿತು ವಿಚಾರ ಸಂಕಿರಣ

Seminar on Modi@20
Photo Credit : By Author

ಮೈಸೂರು: ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ನಡೆದ ಮೋದಿ@20 ಕೃತಿ ಕುರಿತಾದ ನರೇಂದ್ರ ಮೋದಿ ಅವರ ಸಾರ್ಥಕ ಆಡಳಿತ ಹಾಗೂ ಸಾಮರ್ಥ್ಯ ಕುರಿತ ವಿಚಾರ ಸಂಕಿರಣ ನಡೆಯಿತು

ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಅವರು, ನರೇಂದ್ರ ಮೋದಿ 12.5 ವರ್ಷ ಗುಜರಾತಿನ ಮುಖ್ಯಮಂತ್ರಿಯಾಗಿ, 8 ವರ್ಷ ಪ್ರಧಾನ ಮಂತ್ರಿಯಾಗಿ ನೀಡಿರುವ ಆಡಳಿತ ಅಂತಃಕರಣದಿಂದ ಕೂಡಿದೆ. ಮೈಸೂರು ಸಂಸ್ಥಾನದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಬಳಿಕ ಈ ದೇಶದಲ್ಲಿ ಅಂತಃಕರಣದ ಆಡಳಿತ ನೀಡಿದವರು ನರೇಂದ್ರ ಮೋದಿ ಎಂದರು.

ಕೆಂಪುಕೋಟೆಯಲ್ಲಿ ನಿಂತು ಹಿಂದಿನ ಪ್ರಧಾನಿಗಳಂತೆ ಭಾಷಣ ಮಾಡದ ಮೋದಿ ಅವರು, ಶೌಚಾಲಯ ನಿರ್ಮಾಣ ಕ್ರಾಂತಿಗೆ ಕರೆ ನೀಡಿದರು. ಗೃಹ ಬಳಕೆ ಅನಿಲದ ಸಬ್ಸಿಡಿ ಬಿಡುವಂತೆ ಮನವಿ ಮಾಡಿ 9 ಕೋಟಿ ಕುಟುಂಬಗಳಿಗೆ ಉಚಿತ ಗ್ಯಾಸ್ ನೀಡಿ ಮಹಿಳೆಯರಿಗೆ ಹೊಗೆ ಮುಕ್ತ ಜೀವನ ಕೊಟ್ಟರು. ಜನ್‌ಧನ್ ಖಾತೆ ಮೂಲಕ ಶೇ.58 ಜನರು ಬ್ಯಾಂಕ್ ಖಾತೆ ಮಾಡಿಸಿಕೊಂಡರು.

2 ವರ್ಷಗಳ ಕೊರೊನಾ ಸಾಂಕ್ರಾಮಿಕ ರೋಗದಿಂದ ಅನೇಕರು ಮೃತರಾದರು. ಆ ಎರಡು ವರ್ಷ ಹಸಿವಿನಿಂದ ಯಾರೂ ಸಾಯಲಿಲ್ಲ. 200 ಕೋಟಿ ಜನರು ಲಸಿಕೆ ಪಡೆದರು. ಲಸಿಕೆ ವಿರೋಧಿಸಿದವರು ಪಡೆದದ್ದು ಮೋದಿ ಅವರ ಸಾಧನೆಯಾಗಿದೆ. ಈ ದೇಶದ ಯುವಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ಮತ್ತು ವಿಶ್ವಾಸ. ರಷ್ಯಾ-ಉಕ್ರೇನ್ ಯುದ್ಧದ ವೇಳೆ 20 ಸಾವಿರ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದರು. ಹಾಗಾಗಿ ಮೋದಿ@20 ಕೃತಿಯಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರು ತಮ್ಮ ಲೇಖನದಲ್ಲಿ ಮೋದಿ ಯುವಕರ ಕಣ್ಮಣಿ, ಯುವಕರ ಆದರ್ಶ ಎಂದು ಹೇಳಿರುವುದು ಸಮರ್ಥ ಗ್ರಹಿಕೆ ಎಂದು ಹೇಳಿದರು.

ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಪ್ರಧಾನಿ ನರೇಂದ್ರ ನೋದಿ ಅವರನ್ನು ಹುಡುಕಿಕೊಂಡು ಬಂದು ಮಾತಾಡಿಸುತ್ತಾರೆ. ಹಾಗೇ ಪಾಕಿಸ್ತಾನದ ಸಚಿವರೊಬ್ಬರು ಮೋದಿಯಂತಹ ನಾಯಕ ನಮಗೂ ಸಿಗಬೇಕಾಗಿತ್ತು ಎಂದಿದ್ದಾರೆ. ಯೋಗ, ಆಯುರ್ವೇದ ಸೇರಿ ಭಾರತದ ಪರಂಪರೆಗೆ ವಿಶ್ವಮಾನ್ಯತೆ ದೊರೆತದ್ದು ಮೋದಿ ಅವರ ಹೆಗ್ಗಳಿಕೆ. ಜೂ.21ರಂದು ಕರೆಕೊಟ್ಟ ವಿಶ್ವ ಯೋಗ ದಿನಕ್ಕೆ ಜಗತ್ತಿನ 195 ರಾಷ್ಟ್ರಗಳ ಪೈಕಿ 192 ರಾಷ್ಟ್ರಗಳು ಆಚರಿಸಿದವು. ಉಳಿದ ಮೂರು ರಾಷ್ಟ್ರಗಳಿಗೆ ಮಾತ್ರ ಯೋಗ ದಿನ ಆಚರಿಸುವ ಯೋಗಾ ಇರಲಿಲ್ಲ ಎಂದರು.

ದಲಿತ ಸಮುದಾಯದ ರಾಮನಾಥ್ ಕೋವಿಂದ್, ಈಗ ಅದಿವಾಸಿ ಸಮಾಜದ ದ್ರೌಪದಿ ಮುರ್ಮು ಅವರಿಗೆ ದೇಶದ ಅತ್ಯುನ್ನತ ಸ್ಥಾನ ನೀಡಿದರು. ಇದು ದೀನ ದಲಿತರ ಉದ್ಧಾರದ ಬಗ್ಗೆ ಕೇವಲ ಮಾತನಾಡದೇ ಅಧಿಕಾರ ನೀಡಿದರು. ಈ ಉದಾತ್ತ ಗುಣವನ್ನು ದೇಶದ ಜನರು ಗಮನಿಸಬೇಕು ಎಂದು ತಿಳಿಸಿದರು.

ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ವಕೀಲ ಓ.ಶ್ಯಾಂಭಟ್, ಸಮಾಜ ಸೇವಕ ಮಾ.ವೆಂಕಟರಾಮ್, ಮೂಳೆರೋಗ ತಜ್ಞ ಡಾ.ರವೀಂದ್ರನಾಥ್ ಹಾಜರಿದ್ದರು.

See also  ಜಗಮೆಚ್ಚಿದ ಮಗ ಪುನೀತ್ ರಾಜಕುಮಾರ್ ಲೋಕದಲ್ಲಿ ಚಿರಸ್ಥಾಯಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು