News Kannada
Saturday, March 25 2023

ಮೈಸೂರು

ಮೈಸೂರು: ಟೀ ವಿತರಿಸಿ ಪ್ರಧಾನಿ ಮೋದಿ ಜನ್ಮದಿನ ಆಚರಣೆ

Mysuru: Prime Minister Narendra Modi celebrates his birthday by distributing tea
Photo Credit : By Author

ಮೈಸೂರು: ನರೇಂದ್ರ ಮೋದಿ ಅಭಿಮಾನಿ ಬಳಗ ಹಾಗೂ ಅಪೂರ್ವ ಸ್ನೇಹ ಬಳಗದ ವತಿಯಿಂದ ಚಾಮುಂಡಿಪುರಂನ ಅಪೂರ್ವ ಹೋಟೆಲ್ ನಲ್ಲಿ ಉಚಿತ ಟೀ ವಿತರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಮಾಜಿ ಮೇಯರ್ ಸಂದೇಶ್ ಸ್ವಾಮಿ ಅವರು, ಕೊರೋನಾದಂತಹ ಸಂದರ್ಭ ಜಗತ್ತೇ ಅಚ್ಚರಿ ಪಡುವಷ್ಟು ದೇಶದ ಜನರಿಗೆ ಉಚಿತ ಕೊರೋನಾ ಲಸಿಕೆ ನೀಡುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ವಿಸ್ಮಯವನ್ನೇ ಮೂಡಿಸಿದೆ ಎಂದರು.

ಕಾಶ್ಮೀರದಲ್ಲಿ ಉಗ್ರರ ಭಯ ತಪ್ಪಿಸಿದ್ದು, 370ನೇ ವಿಧಿ ತೆಗೆದು ಹಾಕಿರುವುದು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಇವೆಲ್ಲವೂ ಜನರ ಬಹು ದಿನದ ಕನಸಾಗಿತ್ತು. ಅದನ್ನು ಮೋದಿಯವರು ನನ್ನಾಗಿಸಿದ್ದಾರೆ ಎ೦ದರು. ಪ್ರಧಾನಿ ನರೇಂದ್ರ ಮೋದಿ ಓರ್ವ ಸಂತ, ಮೋದಿ ಪ್ರಧಾನಿ ಆಗಿರುವುದು ಬಹುಜನರ ತಪ್ಪಸ್ಸೆಂದು ಭಾವಿಸಿದ್ದೇನೆ. ಪ್ರಧಾನಿಯಾದ ಮೇಲೆ ಬದಲಾವಣೆಗಳ ಮಹಾಪೂರವೇ ನಡೆದಿದೆ. ಕೇಂದ್ರ ಸರ್ಕಾರ ಆಡಳಿತವನ್ನು ಜನತೆ ಮೆಚ್ಚಿಕೊಂಡಿದ್ದಾರೆ. ಕಾಂಗ್ರೆಸ್ ಈ ದೇಶದ ಬಡ ಜನರನ್ನು ಕೇವಲ ಒಟ್ ಬ್ಯಾಂಕ್ ಮಾಡಿಕೊಂಡು ಬಂದಿದೆ. ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆದಾಗಿನಿಂದ ಇಲ್ಲಿಯವರೆಗೂ ಭ್ರಷ್ಟಾಚಾರ ರಹಿತವಾದ ಆಡಳಿತವನ್ನು ನೀಡಿದ್ದಾರೆ.

ಶಿಕ್ಷಣ ಆರೋಗ್ಯ ಕೈಗಾರಿಕೆ ಮತ್ತು ಉದ್ಯೋಗ ಹೀಗೆ ಎಲ್ಲಾ ರಂಗದಲ್ಲೂ ಬದಲಾವಣೆಗೆ ನಾಂದಿ ಹಾಡಿದ್ದಾರೆ .ನೂರಾರು ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ .ಮಹಿಳೆಯರ ಸಬಲೀಕರಣ ರೈತರ ಮೇಲಿನ ಕಾಳಜಿ ಶ್ರಮಿಕ ವರ್ಗದ ಏಳಿಗೆ ಕಾರ್ಮಿಕ ಕಲ್ಯಾಣ ಹೀಗೆ ಮನೆಯಿಂದ ಹತ್ತು ಹಲವಾರು ಕಾರ್ಯಕ್ರಮಗಳನ್ನು ನೀಡಿರುವ ಹೆಗ್ಗಳಿಕೆ ಮೋದಿ ಅವರದು ಎಂದು ಹೇಳಿದರು.

ದಿನದ 24 ಗಂಟೆಯಲ್ಲಿ 18ಗಂಟೆಗಳ ಕಾಲ ನಿರಂತರವಾಗಿ ದೇಶದ ಸೇವೆಯನ್ನು ಮಾಡುತ್ತಿರುವ ಪ್ರಧಾನಿ ಈ ದೇಶಕ್ಕೆ ಕೀರ್ತಿ ಮತ್ತು ಪ್ರತಿಷ್ಠೆಯನ್ನು ತಂದು ಕೊಟ್ಟಿದ್ದಾರೆ .ದೇಶದ ಐಕ್ಯತೆ ಸಮಗ್ರತೆ ಮತ್ತು ಅಖಂಡತೆಯನ್ನು ಕಾಪಾಡುವ ದೃಷ್ಟಿಯಿಂದ ಮೋದಿಯವರ ಶ್ರಮದ ಪ್ರಶಂಸನೀಯವಾದುದು ಎಂದರು

ಮಾಜಿ ಮೇಯರ್ ಸುನಂದಾ ಪಾಲನೇತ್ರ ಮಾತನಾಡಿ, ಮೋದಿ ಅವರು ದೇಶದ ಹಿರಿಮೆ ಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾರೆ. ಅವರ ಆತ್ಮ ನಿರ್ಭರ್‌ ಭಾರತ್ ಪರಿಕಲ್ಪನೆ ವಿಶ್ವಮಾನ್ಯತೆ ಪಡೆದಿದೆ. ರೈತರು, ಕಾರ್ಮಿಕರಿಗೆ ವಿಶೇಷ ಯೋಜನೆಗಳನ್ನು ರೂಪಿಸಿ ಬಡ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಸಂಕಲ್ಪ ತೊಟ್ಟಿದ್ದು, ಜನರ ಮನ ಗೆದ್ದಿದ್ದಾರೆ ಎಂದರು.

ಬಿಜೆಪಿ ಮುಖಂಡರಾದ ಯಶಸ್ವಿನಿ ಸೋಮಶೇಖರ್ ಮಾತನಾಡಿ ಮೋದಿ ಅವರ ಸಾರಥ್ಯದಲ್ಲಿ ಭಾರತ ವಿಶ್ವದ ಗಮನ ಸೆಳೆಯುತ್ತಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ಯುವ ಸಮುದಾಯಕ್ಕೆ ಪ್ರೋತ್ಸಾಹ ದೊರೆಯುತ್ತಿದೆ. ಆತ್ಮ ನಿರ್ಭರ ಭಾರತ ಸಹ ಉಪಯುಕ್ತ ಯೋಜನೆ ಎಂದರು.

ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಯಶಸ್ವಿನಿ ಸೋಮಶೇಖರ್, ನಗರ ಪಾಲಿಕಾ ಸದಸ್ಯರಾದ ಮಾ.ವಿ.ರಾಮ್ ಪ್ರಸಾದ, ಜಗದೀಶ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಮಹೇಂದ್ರ ಸಿಂಗ್ ಕಾಳಪ್ಪ , ಸುಚೀಂದ್ರ , ರವಿಶಂಕರ್, ರಾಜಣ್ಣ , ಪುರುಷೋತ್ತಮ್ ಇನ್ನಿತರರು ಇದ್ದರು.

See also  ಅಣ್ಣನಿಂದ ತಂಗಿ ಮೇಲೆ ಅತ್ಯಾಚಾರ: ಗರ್ಭಿಣಿಯಾದ 16 ವರ್ಷದ ಬಾಲಕಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು