ಮೈಸೂರು: ಕೆಎಂಪಿಕೆ ಟ್ರಸ್ಟ್ ವತಿಯಿಂದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಸಹಯೋಗದಲ್ಲಿ ಮೈಸೂರು ದಸರಾ ವಸ್ತುಪ್ರದರ್ಶನ ಪಿ.ಕಾಳಿಂಗರಾವ್ ಗಾನಮಂಟಪದಲ್ಲಿ ನಡೆದ ವಾಯ್ಸ್ ಆಫ್ ಮೈಸೂರು 2022ರ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪುಟ್ಟಮಕ್ಕಳು ಮತ್ತು ಹಿರಿಯ ನಾಗರಿಕರು ಸೇರಿದಂತೆ 4ವಿಭಾಗದಲ್ಲಿ ಸುಮಾರು 90ಸ್ಪರ್ಧಿಗಳು ಭಾಗವಹಿಸಿದ್ದರು, 14ವರ್ಷದ ಒಳಗಿನ ಸ್ಪರ್ಧೆಯಲ್ಲಿ ಪ್ರಥಮ:ಶ್ರೀಧನ್ಯ ಜಿ.ರಾಜ್, ದ್ವಿತೀಯ: ಲಹರಿ ಹೆಚ್.ಎಮ್, ತೃತೀಯ: ಜೇರುಷ, ಸಮಾಧಾನಕರ:ಸಾನ್ವಿ ರಾವ್, ಸಮಾಧಾನಕರ: ಸಾನ್ವಿ ಆರ್,
14-24 ವರ್ಷದ ವಿಭಾಗದಲ್ಲಿ ಪ್ರಥಮ: ಸಿಂಚನ ಗೌಡ, ದ್ವಿತೀಯ:ಯಶ್ವಂತ್ ಕುಮಾರ್, ತೃತೀಯ:ವಾದಿರಾಜ್ ಜಮದಗ್ನಿ, ಸಮಾಧಾನಕರ:ಪ್ರಣೀಲ್, ಸಮಾಧಾನಕರ: ಶ್ರೇಯಸ್ ಕೆಎಸ್, 24-60ವರ್ಷದ ವಿಭಾಗದಲ್ಲಿ ಪ್ರಥಮ:ರಾಜೇಶ್ವರಿ ಎಂ, ದ್ವಿತೀಯ:ಶೇಖರ್ ಕೆಜೆ, ತೃತೀಯ: ನಾಗರಾಜು, ಸಮಾಧಾನಕರ: ಶಾಂತಕುಮಾರ್, ಸಮಾಧಾನಕರ:- ರಶ್ಮಿ ರಾವ್,
60ವರ್ಷ ಮೇಲ್ಪಟ್ಟ ಹಿರಿಯನಾಗರಿಕರ ವಿಭಾಗದಲ್ಲಿ ಪ್ರಥಮ: ಎಮ್ ಮಹದೇವ, ದ್ವಿತೀಯ:ಜಗದೀಶ್, ತೃತೀಯ:ಸಾಂಬಮೂರ್ತಿ, ಸಮಾಧಾನಕರ: ವೀಣಾ ಎಮ್.ವಿ, ಸಮಾಧಾನಕರ: ರೇವಣ್ಣ, ವಿಜೇತರಾಗಿದ್ದು ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ.ಪ್ರಕಾಶ್ ಮಾತನಾಡಿ ಮಕ್ಕಳಲ್ಲಿ ವಿಶೇಷ ಪ್ರತಿಭೆಯಿರುತ್ತದೆ ಸಂಗೀತ, ಕ್ರೀಡೆ, ಸಾಹಿತ್ಯ, ನಟನೆ ಕ್ಷೇತ್ರಗಳಲ್ಲಿ ಪ್ರಾಥಮಿಕವಾಗಿ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುವ ಕೆಲಸ ಪೋಷಕರಿಂದ ಪ್ರಾರಂಭವಾಗಬೇಕು, ಪ್ರತಿಭೆಯೆನ್ನುವುದು ಯಾರ ಸ್ವತ್ತಲ್ಲ ಹಾಗಾಗಿ ಎಲ್ಲರಿಗೂ ವೇದಿಕೆ ಸಿಗಬೇಕು ಎನ್ನುವ ಆಸೆಯಿರುತ್ತದೆ ಅಂತಹ ಕಲಾಸಕ್ತರಿಗೆ ವಾಯ್ಸ್ ಆಫ್ ಮೈಸೂರು ಅಂತಹ ಕಾರ್ಯಕ್ರಮಗಳು ಪ್ರೇರಣೆಯಾಗಿದೆ ಎಂದರು
ಇದೇ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಹೇಮಾನಂದೀಶ್, ರೂಪದರ್ಶಿಯಾದ ತನಿಷ್ಕಾ ಶೆಟ್ಟಿ, ಮನೋವೈದ್ಯರಾದ ಡಾ. ರೇಖಾ ಮನಃ ಶಾಂತಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಸಂಶೋಧನಾ ಮತ್ತು ಅಧ್ಯಯನ ವಿಭಾಗದ ಅಧ್ಯಕ್ಷರಾದ ಡಾ. ಪವಿತ್ರ ಆರ್ ಎಚ್, ಕಾಂಗ್ರೆಸ್ ಮುಖಂಡರಾದ ಎನ್ ಎಂ ನವೀನ್ ಕುಮಾರ್, ಬಿಜೆಪಿ ಮುಖಂಡರಾದ ಪ್ರಭಾಕರ್ ಜೈನ್, ಮಂಜು ಸಿ ಗೌಡ, ಕಡಕೊಳ ಜಗದೀಶ್, ರಾಘವೇಂದ್ರ ಪ್ರಸಾದ್, ಇಂದ್ರಾಣಿ ಅನಂತರಾಮು, ರಶ್ಮಿ, ಸುಧಾ ಗೌರವ್, ಗಿರಿಜಾ, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್, ನಿರೂಪಕರಾದ ಅಜಯ್ ಶಾಸ್ತ್ರಿ, ಸುಚೀಂದ್ರ, ಚಕ್ರಪಾಣಿ, ವರಲಕ್ಷ್ಮಿ, ನಾಗಶ್ರೀ, ಮಂಜುನಾಥ್, ಚಂದ್ರು ಹಾಗೂ ಇನ್ನಿತರರು ಇದ್ದರು.