News Kannada
Tuesday, June 06 2023
ಮೈಸೂರು

ಜ.29ರಂದು ನಗರಕ್ಕೆ ಸಿಎಂ ಆಗಮನ ಹಿನ್ನೆಲೆ, ನಗರದಲ್ಲಿ ಪಾಳು ಬಿದ್ದ ಪ್ರವಾಸಿ ಮಂದಿರಕ್ಕೆ ಕಾಯಕಲ್ಪ

Cm Basavaraj Bommai's visit to city on Jan. 29: Kayakalpa to visit dilapidated tourist temple in the city
Photo Credit : News Kannada

ನಂಜನಗೂಡು: ಜ.29ರಂದು ಭಾನುವಾರ ನಂಜನಗೂಡಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಪಾಳು ಬಿದ್ದಿರುವ ಪ್ರವಾಸಿ ಮಂದಿರಕ್ಕೆ ಕಾಯಕಲ್ಪ ಕಲ್ಪಿಸಲಾಗುತ್ತಿದೆ.

ಎರಡನೇ ಬಾರಿಗೆ ನಂಜನಗೂಡಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ, ಬಸವರಾಜ ಬೊಮ್ಮಾಯಿ ಅವರು ಮೊದಲ ಬಾರಿಗೆ ಆಗಮಿಸುವ ವೇಳೆ ಚಾಮರಾಜನಗರ ರಸ್ತೆ, ಹಾಗೂ ನಂಜನಗೂಡಿನ ಇನ್ನುಳಿದ ರಸ್ತೆಗಳಲ್ಲಿ ಗುಂಡಿ ಬಿದ್ದಿರುವುದನ್ನು ಮುಚ್ಚಿದ ಅಧಿಕಾರಿಗಳು, ಈ ಬಾರಿ ನಗರದ ಪ್ರವಾಸಿ ಮಂದಿರ ಹಾಗೂ ರಸ್ತೆಗಳನ್ನು ಸ್ವಚ್ಛ ಮಾಡಲಾಗುತ್ತಿದೆ.

2004ರಲ್ಲಿ ಧರಮಸಿಂಗ್ ಲೋಕೋಪಯೋಗಿ ಸಚಿವರು ಹಾಗೂ ಮಾಜಿ.ಸಚಿವ ಡಾ.ಎಚ್ ಸಿ ಮಹದೇವಪ್ಪ ಕೇಂದ್ರ ಸಚಿವರಾಗಿದ್ದ ಹಾಲಿ ಸಂಸದ ಶ್ರೀನಿವಾಸ್ ಪ್ರಸಾದ್ ರವರು ಅನುದಾನ ನೀಡಿ ಪ್ರವಾಸಿ ಮಂದಿರವನ್ನು ಅಭಿವೃದ್ಧಿ ಪಡಿಸಲಾಗಿತ್ತು. ಅಂದಿನಿಂದ ಇಂದಿನ ತನಕ ಬಾಳು ಬಿದ್ದಬಂಗಲೆಯಯಂತಾಗಿತ್ತು. ಆದರೆ ಇದನ್ನು ಸಾರ್ವಜನಿಕರ ಬಳಕೆಗೆ ನೀಡಿರಲಿಲ್ಲ.

ಶಾಸಕ ಬಿ.ಹರ್ಷವರ್ಧನ್ ಗಮನಹರಿಸಿ, ಬಾಳು ಬಿದ್ದ ಪ್ರವಾಸಿ ಮಂದಿರವನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಆಗಮಿಸುತ್ತಾರೆ ಎಂದರೆ ಎಲ್ಲಾ ಕೆಲಸಗಳನ್ನು ಮಾಡುತ್ತಿರುವ ಅಧಿಕಾರಿಗಳು ಇನ್ನುಳಿದ ದಿನಗಳಲ್ಲಿ ಯಾಕೆ ಮಾಡುವುದಿಲ್ಲ ಎನ್ನುವುದು ಸಾರ್ವಜನಿಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿಗಳು ಮಾತ್ರ ಮನುಷ್ಯರಾ..? ಇಲ್ಲಿ ಇರುವವರು ಮನುಷ್ಯರಲ್ಲವೇ..? ಹಾಗಾದರೆ ಪ್ರತಿ ತಿಂಗಳು ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ತಾಲೂಕುಗಳಿಗೆ ಮುಖ್ಯಮಂತ್ರಿಗಳು ಆಗಮಿಸಿದರೆ ಇನ್ನು ಅಭಿವೃದ್ಧಿ ಆಗುತ್ತದೆ. ಎಂದು ನಂಜನಗೂಡಿನಲ್ಲಿ ಯುವ ಮುಖಂಡ ಬಾಲರಾಜ್ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

See also  ಅಕ್ರಮ ಬಯಲಿಗೆಳೆಯಲು ಕ್ರಮ:ಸಂಸದೆ ಸುಮಲತಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು