News Kannada
Friday, March 31 2023

ಮೈಸೂರು

ಹಿರೀಕ್ಯಾತನಹಳ್ಳಿ: ದ್ವಾದಶ ಜ್ಯೋತಿ ಲಿಂಗಗಳ ದರ್ಶನದ ರಥಕ್ಕೆ ಅದ್ಧೂರಿ ಸ್ವಾಗತ

A grand welcome to the chariot of darshan of Dwadasha Jyothilingas
Photo Credit : By Author

ಹಿರೀಕ್ಯಾತನಹಳ್ಳಿ: ಸಾಕ್ಷಾತ್ ದ್ವಾದಶ ಜ್ಯೋತಿ ಲಿಂಗಗಳ ಪುಣ್ಯ ದರ್ಶನ ಶಿವನ ಸ್ವರೂಪದ ದರ್ಶನದ ರಥಕ್ಕೆ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಅದ್ದೂರಿ ಸ್ವಾಗತ ನೀಡಿದರು.

ಹುಣಸೂರು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಓಂ ಶಾಂತಿ ಭವನದಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶಿವನ ಶೋಭ ಯಾತ್ರೆಯ ರಥವು ಜ.21ರಿಂದ ಫೆಬ್ರವರಿ 17ರ ತನಕ ತಾಲೂಕಿನ ಪ್ರತಿ ಹಳ್ಳಿಗಳಲ್ಲೂ ಸಂಚರಿಸಲಿದೆ.

ಈ ಬಗ್ಗೆ ಮಾತನಾಡಿದ ಸೇವಾ ಕೇಂದ್ರದ ಮುಖ್ಯಸ್ಥರು ನಾಗು ಅಕ್ಕ ಅವರು ಹಳ್ಳಿಗಳ ಜನರಿಗೆ ಸಂದೇಶ ಸಾರಿ ರೈತರಿಗೆ ಬೆಳೆ ಮಳೆ ಚೆನ್ನಾಗಿ ಆಗಲಿ ಹಳ್ಳಿ ಹಳ್ಳಿಗೂ ಶಿವನ ಸಂದೇಶ ಕೊಟ್ಟು ಎಲ್ಲರು ಮಾನಸಿಕ ಒತ್ತಡದಿಂದ ದೂರ ಬರಲು ಈ ಸೇವೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಇದಕ್ಕೂ ಮೊದಲು ಗ್ರಾಮಸ್ಥರು ಗ್ರಾಮದ ಪ್ರಮುಖ ಬೀದಿಯಲ್ಲಿ ರಂಗೋಲಿ ಬಿಡಿಸಿ ರಥವನ್ನು ವಾದ್ಯಗೋಷ್ಠಿಯೊಂದಿಗೆ ಗ್ರಾಮದ ದೇವಸ್ಥಾನಕ್ಕೆ ಕರೆತರಲಾಯಿತು. ನಂತರ ಜನರಿಗೆ ರಥದ ಬಗ್ಗೆ ಪ್ರವಚನವನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಓಂ ಶಾಂತಿ ಕೇಂದ್ರದ ಮೂರ್ತಿ, ರಾಜು, ಸಂದೇಶ, ಸತೀಶ್, ಶಿವಣ್ಣ, ಗ್ರಾಮದ ಮುಖಂಡರಾದ ಕೃ?ಗೌಡ ನಂಜೇಗೌಡ ಬ್ರಹ್ಮಾನಂದ ತಿಮ್ಮನಾಯಕ ಜವರೇಗೌಡ, ಕುಮಾರ, ಶಿವಲಿಂಗೇಗೌಡ, ಶಿವನಾಯಕ, ಕುಮಾರ, ದೇವೇಗೌಡ, ಮಂಜು ಹಾಗೂ ವೇಣುಗೋಪಾಲ್ ವಿದ್ಯಾ ಸಂಸ್ಥೆಯ ಶಿಕ್ಷಕರು ಮಕ್ಕಳು ಹಾಜರಿದ್ದರು.

See also  ಎಚ್.ಡಿ.ಕೋಟೆ: ಹಾಡಿ ವ್ಯಕ್ತಿ ಸಾವು ಖಂಡಿಸಿ ಗಿರಿಜನರಿಂದ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು