News Kannada
Saturday, April 01 2023

ಮೈಸೂರು

ಮೈಸೂರು: ಫೆ.26, ಮಕ್ಕಳಿಗೆ ಸಾಮೂಹಿಕ ಉಚಿತ ಅಕ್ಷರಾಭ್ಯಾಸ

Mass free literacy for children on Feb. 26
Photo Credit : By Author

ಮೈಸೂರು: ಮೈಸೂರಿನ ವಿಶ್ವೇಶ್ವರನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಮತ್ತು ಬ್ರಹ್ಮಿಭೂತ ಶ್ರೀ ವಾಸುದೇವ ಮಹರಾಜ್ ಫೌಂಡೇಶನ್ ಸಹಯೋಗದಲ್ಲಿ ಫೆ.26ರಂದು ಭಾನುವಾರ ಬೆಳಗ್ಗೆ 8 ಘಂಟೆಯಿಂದ ಎಲ್ಲ ಜನಾಂಗದವರಿಗೆ ಉಚಿತವಾಗಿ ಸಾಮೂಹಿಕ‌ ಅಕ್ಷರಾಭ್ಯಾಸ ಹಮ್ಮಿಕೊಳ್ಳಲಾಗಿದೆ.

ಈ ಕುರಿತಂತೆ ಕೆಎಂಪಿಕೆ ಟ್ರಸ್ಟ್ ಕಾರ್ಯದರ್ಶಿ ಅಜಯ್ ಶಾಸ್ತ್ರಿ ಮಾಹಿತಿ ನೀಡಿದ್ದು ಮೈಸೂರಿನ ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್‌ ಶಾಲೆಯಲ್ಲಿ ಫೆ.26ರಂದು ಉಚಿತ ಸಾಮೂಹಿಕ ಅಕ್ಷರಭ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ ಎಂದರು.

ಪ್ರತಿಯೊಬ್ಬ ನಾಗರಿಕನಿಗೂ ಜೀವಿಸಲೂ ಮನೆ ಆಹಾರ ಬಟ್ಟೆ ಮೂಲಭೂತ ಸೌಲಭ್ಯವಾದರೇ, ಹುಟ್ಟಿದ ಮಗುವಿಗೂ ಅನ್ನ ಅಕ್ಷರ ಆರೋಗ್ಯ ಬದುಕಲು ಪ್ರಮುಖ‌ ಭಾಗ, ಹಾಗಾಗಿ ಮಗುವಿಗೆ ಮಾತನಾಡುವ ಭಾಷೆ ಮತ್ತು ವಿದ್ಯೆ ಕಲಿಸುವ ಪ್ರಾರಂಭ ಹಂತ ಅಕ್ಷರಾಭ್ಯಾಸ ಇದು ಪೋಷಕರ ಮೂಲ ಕರ್ತವ್ಯ ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆಯಾಗಿದ್ದು,ತಾಯಿಯೇ ಮೊದಲ ಗುರು, ಮಗುವಿಗೆ ಅಕ್ಷರಭ್ಯಾಸ ಎನ್ನುವುದು ಜ್ಞಾನದೇಗುಲದ ಪ್ರಮುಖ ಘಟ್ಟವಾಗಿದೆ.

ಆದ್ದರಿಂದ ಮಹರ್ಷಿ ಶಾಲೆಯಲ್ಲಿ ನಡೆಯಲಿರುವ ಸಾಮೂಹಿಕ ಉಚಿತ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಎಲ್ಲಾ ಜನಾಂಗದವರು ತಮ್ಮ, 2ವರ್ಷದಿಂದ 5ವರ್ಷದ ವಯೋಮಿತಿ ಒಳಗಿನ ಮಕ್ಕಳು ಅವರ ಪೋಷಕರೊಡನೆ ಅಕ್ಷರಾಭ್ಯಾಸದಲ್ಲಿ ಭಾಗವಹಿಸಲು 9880752727 7829067769 ಸಂಪರ್ಕಿಸಬಹುದು, ನಮ್ಮ ಟ್ರಸ್ಟ್ ವತಿಯಿಂದ ಮಕ್ಕಳಿಗೆ ಸ್ಲೇಟು, ಬಳಪ ಇನ್ನಿತರ ಸಾಮಾಗ್ರಿಗಳನ್ನ ಉಚಿತವಾಗಿ ಒದಗಿಸಲಾಗುವುದು ಎಂದು ತಿಳಿಸಿದರು.

ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ತಲಕಾಡು ಶುಕಶಂಕರ ಪೀಠ ಬಾಲಕೃಷ್ಣಾನಂದ ಮಹಾಸಂಸ್ಥಾನಂನ  ಗೋವಿಂದಾನಂದ ಸರಸ್ವತಿ ಮಹಾಸ್ವಾಮೀಜಿ ಸಾನಿಧ್ಯ ವಹಿಸುವರು.  ಶಾಸಕರಾದ ಎಸ್.ಎ ರಾಮದಾಸ್‌ ಉದ್ಘಾಟಿಸುವರು. ಮೈಸೂರು ಬ್ರಾಹ್ಮಣ ಸಂಘ ಅಧ್ಯಕ್ಷ ಡಿಟಿ. ಪ್ರಕಾಶ್ ಅಧ್ಯಕ್ಷತೆ ವಹಿಸುವರು.

ಮಹಾಪೌರರಾದ ಶಿವಕುಮಾರ್, ಬಿಜೆಪಿ ನಗರ ಅಧ್ಯಕ್ಷರಾದ ಟಿ ಎಸ್ ಶ್ರೀವತ್ಸ, ಮೂಡ ಮಾಜಿ ಅಧ್ಯಕ್ಷರಾದ ಎಚ್ ವಿ ರಾಜೀವ್, ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪಾಯಿ, ಕಾಂಗ್ರೆಸ್ ಮುಖಂಡರಾದ ಎನ್ಎಂ ನವೀನ್ ಕುಮಾರ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಹೇಮಾನಂದೀಶ್, ಕಾಮಾಕ್ಷಿ ಆಸ್ಪತ್ರೆಯ ಮುಖ್ಯಸ್ಥರಾದ ಮಹೇಶ್ ಶೆಣೈ, ನಗರಪಾಲಿಕಾ ಸದಸ್ಯರಾದ ಮಾವಿ‌. ರಾಮಪ್ರಸಾದ್, ನಂಜುಂಡಸ್ವಾಮಿ‌, ಇನ್ನಿತರರು ಭಾಗವಹಿಸಲಿದ್ದಾರೆ

ಸುದ್ದಿಗೋಷ್ಠಿಯಲ್ಲಿ ಮಹರ್ಷಿ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಣಾಧಿಕಾರಿ ತೇಜಸ್ ಶಂಕರ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್, ಕಾರ್ಯದರ್ಶಿ ಅಜಯ್ ಶಾಸ್ತ್ರಿ, ವ್ಯಂಗ್ಯ ಚಿತ್ರಗಾರ ಕಾರ್ಟೂನ್ ನಾಗೇಂದ್ರಬಾಬು, ಜೀವಧಾರ ರಕ್ತನಿಧಿ ಕೇಂದ್ರದ ಎಸ್.ಈ ಗಿರೀಶ್, ಕಡಕೊಳ ಜಗದೀಶ್, ಇನ್ನಿತರರು ಇದ್ದರು

 

See also  ಬರೀ 28 ಸೆ.ಮೀ. ಮಳೆಗೆ ಸುಬ್ರಹ್ಮಣ್ಯದಲ್ಲಿ ಜಲಸ್ಫೋಟ, ಆತಂಕದಲ್ಲಿ ಜನ ಜೀವನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು