News Kannada
Thursday, March 30 2023

ಮೈಸೂರು

ಮೈಸೂರಿಗೆ ಪಾರಂಪರಿಕ ಇತಿಹಾಸವಿದೆ: ಯಶಸ್ವಿ ಸೋಮಶೇಖರ್

Mysuru has a heritage history: Yashasvi Somashekar
Photo Credit : By Author

ಮೈಸೂರು: ರಾಮಕೃಷ್ಣನಗರ ಬಡಾವಣೆ ಗಮನಿಸಿದರೆ ಪರಿಸರ ಸ್ವಚ್ಛತೆಯೊಂದಿಗೆ ಆಧ್ಯಾತ್ಮಿಕವಾಗಿ ಆಕರ್ಷಣೀಯವಾಗಿದ್ದು, ಸಹಸ್ರಾರು ಹಿರಿಯ ನಾಗರಿಕರು ವಾಯುವಿಹಾರಕ್ಕೆ ಬರುತ್ತಿದ್ದು, ರಾಮಕೃಷ್ಣಪರಮಹಂಸರ ವೃತ್ತ ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವಾಗಿಯೂ ಸಹ ಆಕರ್ಷಿತವಾಗಲಿದೆ ಎಂದು ಮೂಡಾ ಅಧ್ಯಕ್ಷ ಯಶಸ್ವಿ ಸೋಮಶೇಖರ್ ಹೇಳಿದರು.

ಚಾಮುಂಡೇಶ್ವರಿ ಯುವ ಬಳಗ ರಾಮಕೃಷ್ಣನಗರದ ವೃತ್ತದಲ್ಲಿ (ಆಂದೋಲನ ವೃತ್ತ) ಶ್ರೀರಾಮಕೃಷ್ಣ ಪರಮಹಂಸರ 188ನೇ ಜಯಂತಿ ಅಂಗವಾಗಿ ಆಧ್ಯಾತ್ಮಿಕ ಜಗತ್ತು ಕಾರ್ಯಮಕ್ರಮ ಹಮ್ಮಿಕೊಂಡಿದ್ದು ಪರಮಹಂಸರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಆ ನಂತರ ಸಿಹಿ ವಿತರಿಸಿ ಮಾತನಾಡಿದ ಅವರು, ಸ್ವಚ್ಛ ಬಡಾವಣೆ ಎಂದು ಮಾದರಿಯಾಗಿರುವ ರಾಮಕೃಷ್ಣನಗರದಲ್ಲಿ ಸಂಗೀತಾಸಕ್ತರು ಹಿರಿಯ ನಾಗರಿಕರು ಹೆಚ್ಚಿರುವ ಹಿನ್ನಲೆಯಲ್ಲಿ ರಾಮಕೃಷ್ಣನಗರದಲ್ಲಿ ಮುಂದಿನ ದಿನಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರತಿಭಾವಂತ ಮಕ್ಕಳಿಗೆ ವೇದಿಕೆ ಸೃಷ್ಟಿಸಿಕೊಟ್ಟು ಮುಖ್ಯವಾಹಿನಿಗೆ ತರಲು ಯೋಜನೆ ರೂಪಿಸಲಾಗುವುದು ಎಂದರು.

ಹಿರಿಯ ಸಮಾಜ ಸೇವಕರಾದ ರಘುರಾಮ ವಾಜಪೇಯಿರವರು ಮಾತನಾಡಿ ಇಂದು ಮೈಸೂರಿನಲ್ಲಿ ಪರಮಹಂಸರ ನೆನಪು ಮಾಡಿಕೊಳ್ಳಲು ಕಾರಣಕರ್ತರು ಸ್ವಾಮಿ ವಿವೇಕಾನಂದರು, 1892ರಲ್ಲಿ ಬಂದಾಗ ಸುಮಾರು 21 ದಿವಸಗಳ ಕಾಲ ಪ್ರತಿನಿತ್ಯ ರಾಮಕೃಷ್ಣರ ಉಪನ್ಯಾಸವನ್ನು ಮಾಡುತ್ತಿದ್ದರು. ಅದರ ಪ್ರಭಾವದಿಂದಲೇ ಇಂದು ಮೈಸೂರಿನಲ್ಲಿ ರಾಮಕೃಷ್ಣ ಆಶ್ರಮ ಸ್ಥಾಪನೆಯಾಗಿದ್ದು, ನಂತರ ಈಗ ರಾಮಕೃಷ್ಣ ವೃತ್ತದಲ್ಲಿ ಭವ್ಯ ರಾಮಕೃಷ್ಣ ಪರಮಹಂಸರ ಪ್ರತಿಮೆ ಗೋಚರಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಪರಮಹಂಸರು ಸರ್ವಧರ್ಮ ಸಮನ್ವಯ ಸಾರಿದರು. ಅದೇ ರೀತಿ ರಾಷ್ಟ್ರಕವಿ ಕುವೆಂಪುರವರ ಮನೆಯಲ್ಲಿ ರಾಮಕೃಷ್ಣರು, ಶಾರದಾ ಮಾತೆ ಹಾಗೂ ವಿವೇಕಾನಂದರ ಚಿತ್ರಗಳು ಮಾತ್ರ ಇದೆ. ಆ ಪ್ರಭಾವವೇ ಕುವೆಂಪು ರವರ ವಿಶ್ವ ಮಾನವ ಪ್ರಜ್ಞೆಗೆ ಆಕರವಾದಂತದ್ದು ನಾವೆಲ್ಲ ಕಂಡಿದ್ದೇವೆ ಎಂದು ತಿಳಿಸಿದರು.

ಪರಮಪೂಜ್ಯ ಇಳೈಆಳ್ವಾರ್ ಸ್ವಾಮೀಜಿ, ನಗರ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಲಕ್ಷ್ಮೀದೇವಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷ ಹೇಮಾ ನಂದೀಶ್, ನಗರ ಪಾಲಿಕೆ ನಾಮ ನಿರ್ದೇಶಕರಾದ ಜಗದೀಶ್, ಜೀವದಾರರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅಜಯ್ ಶಾಸ್ತ್ರಿ, ರಾಕೇಶ್ ಭಟ್, ಮುಳ್ಳೂರು ಗುರುಪ್ರಸಾದ್, ಸಿದ್ದೇಶ್, ವಿನಯ್ ಕನಗಾಲ್, ಸುಚೇಂದ್ರ, ಮೈಲಾ ವಿಜಯ್ ಕುಮಾರ್, ಚಕ್ರಪಾಣಿ, ಎಸ್ ಬಿ ವಾಸದೇವಮೂರ್ತಿ, ಸುರೇಶ್ ಗೋಲ್ಡ್ , ಮಿರ್ಲೆ ಪನೀಶ್, ಹಿರಿಯಣ್ಣ, ಪ್ರತಾಪ್, ಕೇಬಲ್ ಮಹೇಶ್, ಜಯರಾಮ್ ಇನ್ನಿತರರು ಇದ್ದರು.

See also  ಮೈಸೂರಿನಲ್ಲಿ ದ್ವಿತೀಯ ಪಿಯು ಪರೀಕ್ಷೆ ಸುಸೂತ್ರವಾಗಿ ನಡೆಸಲು ಕ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು