News Kannada
Tuesday, June 06 2023
ಮೈಸೂರು

ನಂಜನಗೂಡು: ಮೃತಪಟ್ಟ ಹಸುವಿಗೆ ವಿಮೆ ನೀಡುವಂತೆ ಮಹಿಳೆಯ ರೋಧನೆ

Woman cries for insurance for dead cow
Photo Credit : News Kannada

ನಂಜನಗೂಡು: ಹಸುವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಮಹಿಳೆಗೆ ಹೈನುಗಾರಿಕೆ. ಈಕೆಯ ಮೂಲ ಆಧಾರ ಸ್ಥಂಭವಾಗಿತ್ತು. ಆದರೆ, ಖಾಯಿಲೆಯಿಂದ ಅನಾರೋಗ್ಯಕ್ಕೆ ತುತ್ತಾಗಿ ಹಸುವೊಂದು ಮೃತಪಟ್ಟಿದೆ. ಮೃತಪಟ್ಟ ಹಸುವಿಗೆ ವಿಮೆ ನೀಡಬೇಕು ಎಂದು ಮಹಿಳೆಯೊಬ್ಬಳು ಒತ್ತಾಯ ಮಾಡಿದ್ದಾಳೆ.

ನಂಜನಗೂಡು ತಾಲೂಕಿನ ದೇವರಾಯಶೆಟ್ಟಿಪುರ ಗ್ರಾಮದ ರಾಣಿ ಎಂಬ ಮಹಿಳೆಯೂ ಸಾಲ ಸೋಲ ಮಾಡಿ ಎರಡು ಹಸುಗಳನ್ನು ಖರೀದಿ ಮಾಡಿದ್ದರು.

ದೇವರಾಯಶೆಟ್ಟಿಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ನ್ಯಾಷನಲ್ ಇನ್ಶೂರೆನ್ಸ್ ಕಂಪನಿಯಿಂದ ಹಸುವಿಗೆ 30 ಸಾವಿರ ವಿಮೆಯನ್ನು ಕೂಡ ಮಾಡಿಸಲಾಗಿತ್ತು. ಹಾಗೂ ವಿಮೆ ಮಾಡಿಸಿದ ಹಸುವಿನ ಕಿವಿಗೆ ಓಲೆ ಹಾಕಲಾಗಿತ್ತು. ಹಸುವಿಗೆ ಓಲೆ ಹಾಕಿದ ಪರಿಣಾಮ ಕಿವಿ ನೋವಾದ ಹಿನ್ನೆಲೆಯಲ್ಲಿ ಓಲೆಯನ್ನು ತೆಗೆದು ಹಾಕಿದ್ದರು.

ಅನಾರೋಗ್ಯ ಕಾರಣದಿಂದಾಗಿ ಹಸು ಮೃತಪಟ್ಟಿದೆ ಎನ್ನಲಾಗಿದ್ದು. ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಡಾ. ನಿರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆ ನಡೆಸಿ, ನ್ಯಾಷನಲ್ ಇನ್ಸೂರೆನ್ಸ್ ಕಂಪನಿಗೆ ವರದಿಯನ್ನು ಕಳುಹಿಸಿದ್ದಾರೆ. ಹಸು ಸಾವನ್ನಪ್ಪಿ, ನಾಲ್ಕು ತಿಂಗಳು ಕಳೆದರೂ ವಿಮೆ ವಾಪಸ್ ಬಂದಿಲ್ಲ. ಹಸುವಿನ ಕಿವಿಯಲ್ಲಿ ಓಲೆ ಇಲ್ಲ. ಹಸು ನಿಮ್ಮದಲ್ಲ ಆದ್ದರಿಂದ ವಿಮೆ ಬರುವುದಿಲ್ಲ ಎಂದು ಡಾ. ನಿರಂಜನ್ ಹೇಳುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ.

ವಿಮೆಯನ್ನು ಇನ್ಸೂರೆನ್ಸ್ ಕಂಪನಿಯವರು ನೀಡುತ್ತಿಲ್ಲ. ವಿಮೆ ನೀಡಿದರೆ ಇನ್ನೊಂದು ಹಸುವನ್ನು ತೆಗೆದುಕೊಂಡು ಜೀವನ ಸಾಗಿಸುತ್ತಿದ್ದೆವು. ನಮ್ಮ ಹಣವನ್ನು ನೀಡದೆ ಕಂಪನಿಯವರು ರೈತರಿಗೆ ವಂಚನೆ ಮಾಡುತ್ತಿದ್ದಾರೆ. ನಾವು ಹಸುಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಇದರಲ್ಲಿ ಬರುವ ಆದಾಯದಲ್ಲಿ ನಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ, ನಮ್ಮ ಬದುಕು ಬೀದಿ ಪಾಲಾಗಿದೆ. ದಯವಿಟ್ಟು ನನಗೆ ವಿಮೆ ಹಣವನ್ನು ಕೊಡಿಸಿ ಎಂದು ಮಹಿಳೆ ಅಂಗಲಾಚಿ ಬೇಡಿಕೊಂಡಿದ್ದಾಳೆ.

ಹಸುಗಳಿಗೆ ರೂ.30 ಸಾವಿರ ಇನ್ಸೂರೆನ್ಸ್ ಮಾಡಿಸಿದರೆ, ನಮ್ಮ ಅಕೌಂಟಿಗೆ ಬರುವುದು 20 ರಿಂದ 25 ಸಾವಿರ ಮಾತ್ರ ಉಳಿಕೆ ಹಣವನ್ನು ನೀಡದೆ ರೈತರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಗ್ರಾಮದಲ್ಲಿ ರೈತರು ಗಂಭೀರವಾಗಿ ಆರೋಪ ಮಾಡಿದ್ದಾರೆ.

ಇಂತಹ ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ನ್ಯಾಷನಲ್ ಇನ್ಶೂರೆನ್ಸ್ ಕಂಪನಿಯ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಂಡು ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

See also  ಬಂಟ್ವಾಳ: ಮೂರ್ಕಜೆ ಕೊಡಂಗಾಯಿ ಪಂಚತೀರ್ಥದಲ್ಲಿ ಪಂಚಲಿಂಗೇಶ್ವರ ದೇವರ ಅವಭೃತ ಸ್ನಾನ ಘಟ್ಟ ಲೋಕಾರ್ಪಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು