News Kannada
Wednesday, May 31 2023
ಮೈಸೂರು

ತಿ.ನರಸೀಪುರ: ದಲಿತ ಸಿಎಂ ಘೋಷಣೆ ಮಾಡಿದ ಪಕ್ಷಕ್ಕೆ ಬೆಂಬಲ, ಮುಖಂಡರ ಘೋಷಣೆ

T. Narasipur: Dalits extend support to party announced by Dalit CM
Photo Credit : By Author

ತಿ.ನರಸೀಪುರ: ರಾಜ್ಯದಲ್ಲಿ ಹಲವು ಸಣ್ಣ ಸಮುದಾಯದ ನಾಯಕರು ಮುಖ್ಯಮಂತ್ರಿಯಾಗಿದ್ದರೂ, ಬಹುಸಂಖ್ಯಾತ ದಲಿತ ಸಮುದಾಯಕ್ಕೆ ಸಿಎಂ ಪದವಿ ದಕ್ಕದೆ ಇರುವುದು ದುರಾದೃಷ್ಟಕರ ವಿಷಯ.  ಮುಂದಿನ ಚುನಾವಣೆಯಲ್ಲಿ ದಲಿತ ಸಿಎಂ ಅಭ್ಯರ್ಥಿ ಘೋಷಣೆ ಮಾಡಿದ ಪಕ್ಷಕ್ಕೆ ದಲಿತ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಿವೆ ಎಂದು ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸೋಸಲೆ ಶಶಿಕಾಂತ ತಿಳಿಸಿದರು.

ಇತ್ತೀಚಿಗೆ ರಾಜ್ಯ ದಲಿತ ಐಕ್ಯ ಸಮಿತಿಯು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಹೇಳಿಕೆ ನೀಡಿದ್ದು, ಇದು ಆ ಸಂಘಟನೆಯ ವೈಯಕ್ತಿಕ ಹೇಳಿಕೆಯಾಗಿದೆ. ಈ ಚುನಾವಣೆಯಲ್ಲಿ ಯಾವ ಪಕ್ಷ ದಲಿತ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತದೆಯೋ ಆ ಪಕ್ಷಕ್ಕೆ ದಲಿತ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಿವೆ ಎಂದರು.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲಿ ದಲಿತ ಸಮುದಾಯದ ಹಿರಿಯ ನಾಯಕರಿದ್ದರೂ ಅನ್ಯ ಸಮುದಾಯದ ಕಿರಿಯ ನಾಯಕರಿಗೆ ಮುಖ್ಯಮಂತ್ರಿಯ ಹುದ್ದೆ  ನೀಡುತ್ತಿದೆ. ಇದು ರಾಜಕೀಯದಲ್ಲಿನ ಅಸ್ಪೃಶ್ಯತೆ . ಹಲವು ದಶಕಗಳಿಂದ ದಲಿತ ಸಿಎಂ ಕೂಗು ಮುನ್ನೆಲೆಗೆ ಬಂದರೂ ದಲಿತರಿಗೆ ಆಯಕಟ್ಟಿನ ಸ್ಥಾನಮಾನ ಅಥವ ಮುಖ್ಯಮಂತ್ರಿ ಗಾದಿಯನ್ನು ತಪ್ಪಿಸುವ ಜಾತಿವಾದಿ ಷಡ್ಯಂತ್ರ ನಡೆಯುತ್ತಿದೆ ಎಂಬುದು ನಿಚ್ಚಳವಾಗಿದೆ. ದಲಿತ ರಾಜಕೀಯ ಮುತ್ಸದಿಗಳಾದ ಕೆ.ಎಚ್.ರಂಗನಾಥ್, ಬಿ.ರಾಚಯ್ಯ , ಎನ್.ರಾಚಯ್ಯ, ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ಜಿ.ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಪದವಿ ನೀಡದೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ವಂಚಿಸಿವೆ. ದಲಿತರ ಮತ ಕಾಂಗ್ರೆಸ್ ನ ಸಂಪ್ರದಾಯ ಮತ ಎಂದು ಬಿಂಬಿತವಾಗಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ದಲಿತ ಸಿಎಂ ಘೋಷಣೆ ಮಾಡಿದ ಪಕ್ಷಕ್ಕೆ ರಾಜ್ಯದಲ್ಲಿರುವ ಎಲ್ಲ ದಲಿತ ಸಂಘಟನೆಗಳು ಬೆಂಬಲ ಸೂಚಿಸಲಿವೆ ಎಂದರು.

ಸಾಮಾಜಿಕ ಸಮಿತಿಯ ಅಧ್ಯಕ್ಷ ಕರೋಹಟ್ಟಿ ಪ್ರಭುಸ್ವಾಮಿ ಮಾತನಾಡಿ, ದಲಿತರಿಗೆ ಸಿಎಂ ಸ್ಥಾನ ನೀಡದಿರುವುದು ಕಪ್ಪುಚುಕ್ಕೆ.ಅರ್ಹತೆ ಇದ್ದರೂ ದಲಿತ ಮುಖಂಡರಿಗೆ ಜೆಡಿಎಸ್ ,ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಮುಖ್ಯಮಂತ್ರಿ ಸ್ಥಾನ ನೀಡಿಲ್ಲ.ಹಾಗಾಗಿ ದಲಿತ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಿದ ಪಕ್ಷಕ್ಕೆ ದಲಿತ ಸಂಘಟನೆಗಳು ಬೆಂಬಲ ಸೂಚಿಸಲಿವೆ ಎಂದರು.

ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕರಾದ ಸೋಸಲೆ ರಾಜಶೇಖರ್, ಬನ್ನಹಳ್ಳಿ ಸೋಮಣ್ಣ, ದಲಿತ ಜಾಗೃತಿ ಸಮಿತಿ ಅಧ್ಯಕ್ಷ ತುಂಬಲ ಮಂಜುನಾಥ್ ಕರೋಹಟ್ಟಿ ಪ್ರಭುಸ್ವಾಮಿ, ಯಡದೊರೆ ಮಹದೇವಯ್ಯ, ಅಲಗೂಡು ಶಿವಣ್ಣ , ಚೌಹಳ್ಳಿ ಜಯರಾಮು, ನಿಂಗರಾಜು ಇತರರು ಹಾಜರಿದ್ದರು.

See also  ಮೈಸೂರು: ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ- ಸತೀಶ್ ಜವರೇಗೌಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು