News Karnataka Kannada
Thursday, March 28 2024
Cricket
ಮೈಸೂರು

ಮಳೆ ಗಾಳಿಗೆ ತೆಂಗು, ಬಾಳೆ ನಾಶ: ರೈತ ಕಂಗಾಲು

Coconuts, bananas destroyed in rain storm: Farmer
Photo Credit : By Author

ಮೈಸೂರು: ಬಿರುಗಾಳಿ ಸಹಿತ ಬಿದ್ದ ಮಳೆಯ ರಭಸಕ್ಕೆ ರೈತ ಕಷ್ಟಪಟ್ಟು ಬೆಳೆದಿದ್ದ ಬಾಳೆ ತೋಟ ಹಾಗೂ ತೆಂಗಿನ ಮರಗಳು ನಾಶವಾಗಿರುವ ಘಟನೆ ಜಿಲ್ಲೆಯ ಸರಗೂರು ತಾಲೂಕಿನ ಹಂಚಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಚಿಪುರ ಗ್ರಾಮದಲ್ಲಿ ನಡೆದಿದೆ.

ಹಂಚಿಪುರ ಗ್ರಾಮದ ನಂದೀಶ್ ಅವರಿಗೆ ಸೇರಿದ 4 ಎಕರೆ ಪ್ರದೇಶದಲ್ಲಿ ಬಾಳೆ ತೋಟ ಹಾಗೂ ತೆಂಗಿನ ಮರ ಬೆಳೆದಿದ್ದರು. ಬಾಳೆ ಫಸಲಿಗೆ ಬರುವ ಹಂತದಲ್ಲಿದ್ದರೆ, ತೆಂಗಿನ ಮರಗಳು ಫಸಲು ಬಿಡುತ್ತಿದ್ದವು. ಇದನ್ನೇ ನಂಬಿ ರೈತ ನಂದೀಶ್ ಜೀವನ ಸಾಗಿಸುತ್ತಿದ್ದರು. ಇದೀಗ ಗಾಳಿ ಮತ್ತು ಮಳೆಯಿಂದಾಗಿ ತೆಂಗಿನ ಮರಗಳು ನೆಲಕ್ಕುರುಳಿದ್ದು, ಬಾಳೆಗಳು ಮುರಿದು ಬಿದ್ದಿವೆ, ಇದರಿಂದಾಗಿ ಸುಮಾರು 10 ಲಕ್ಷಕ್ಕೂ ಹೆಚ್ಚು ಬೆಳೆ ನಾಶವಾಗಿದೆ.

ಇದೀಗ ಬಿರುಗಾಳಿಯಿಂದ ಬಾಳೆ ಗಿಡಗಳು, ತೆಂಗಿನ ಮರಗಳು ಬುಡ ಸಮೇತ ನೆಲಕ್ಕುರುಳಿ ನಷ್ಟ ಅನುಭವಿಸಿ ಕಂಗಾಲಾಗಿರುವ ನಂದೀಶ್ ಸಾಲ ಮಾಡಿ ಬೆಳದಿದ್ದ ಬೆಳೆಯು ಕೈಗೆ ಸೇರುವ ಹೊತ್ತಿನಲ್ಲಿ ನಾಶವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸರ್ಕಾರದಿಂದ ಬರುವಂತಹ ಪರಿಹಾರವನ್ನು ಕೊಡಿಸುವಂತೆ ಅವರು ಮನವಿ ಮಾಡಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು