News Karnataka Kannada
Thursday, April 25 2024
ಮೈಸೂರು

ಮೇವು ವಿತರಿಸಿ ಗಣಪತಿ ಸಚ್ಚಿದಾನಂದ ಶ್ರೀಗಳ ಹುಟ್ಟು ಹಬ್ಬಾಚರಣೆ

Ganapathi Sachchidananda Sri's birthday celebrated by distributing fodder
Photo Credit : By Author

ಮೈಸೂರು: ನಗರದ ಶ್ರೀ ಶ್ರೀ ಅವಧೂತ ದತ್ತ ಪೀಠಾಧಿಪತಿ ಗಣಪತಿ ಸಚ್ಚಿದಾನಂದ ಸ್ವಾಮಿಗಳ 81 ನೇ ಜನುಮ ದಿನಾಚರಣೆಯನ್ನು ಗೋಪೂಜೆ ಮಾಡಿ ಬೆಲ್ಲ, ಹುಲ್ಲು, ಮೇವು ವಿತರಿಸಿ ಆಚರಿಸಲಾಯಿತು.

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಭಾರತಿ ಯೋಗಧಾಮದಲ್ಲಿ ಶ್ರೀಗಳ ಭಕ್ತ ವೃಂದ ದಿಂದ ಶೀಗಳ ಜನ್ಮದಿನಾಚರಣೆಯನ್ನು ಆಚರಿಸಿ, ಈ ಬಾರಿ ನಾಡಹಬ್ಬ ದಸರಾವನ್ನು ಗಣಪತಿ ಸಚ್ಚಿದಾನಂದ ಶ್ರೀಗಳಿಂದ ಉದ್ಘಾಟಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಯಿತು.

ಈ ವೇಳೆ ಮಾತನಾಡಿದ ಕೇಬಲ್ ಮಹೇಶ್ ಅವರು, ಗಣಪತಿ ಸಚ್ಚಿದಾನಂದ ಆಶ್ರಮ ಆಧ್ಯಾತ್ಮಿಕ ಧಾರ್ಮಿಕ ಕೇಂದ್ರದೊಂದಿಗೆ ಪರಿಸರ ಪೋಷಣೆ ಮನಃಶಾಂತಿ ಸಿಗುವ ತಾಣವಾಗಿದೆ ಪ್ರವಾಸೋದ್ಯಮದಲ್ಲಿ ದೇಶವಿದೇಶದಿಂದ ಭಕ್ತವೃಂದವನ್ನು ಆಕರ್ಷಿಸುತ್ತದೆ, ಯಾವುದೇ ಜಾತಿಭೇದವಿಲ್ಲದೆ ಜನಮುಖಿ ಕೇಂದ್ರವಾಗಿದೆ. ಕಳೆದ ಕೋವಿಡ್ ಸಂಧರ್ಭದಲ್ಲಿ ಲಕ್ಷಾಂತರ ಮಂದಿಗೆ ಪ್ರತಿನಿತ್ಯ ಅನ್ನದಾನ ಮತ್ತು ವೈದ್ಯಕೀಯ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ಬಾರಿ ನಾಡಹಬ್ಬ ದಸರಾವನ್ನು ಗಣಪತಿ ಸಚ್ಚಿದಾನಂದ ಶ್ರೀಗಳು ಉದ್ಘಾಟಿಸಿದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮ ಬೆಳೆಯಲು ಸಹಕಾರಿಯಾಗಲಿದೆ ಎಂದರು.

ಅಪೂರ್ವ ಸುರೇಶ್, ವಿಕ್ರಮ ಅಯ್ಯಂಗಾರ್, ದುರ್ಗಾ ಪ್ರಸಾದ್, ಆನಂದ್, ಚೇತನ್, ಮಹದೇವ್ ಸ್ವಾಮಿ, ಸಂತೋಷ್ ಹಾಗೂ ಇನ್ನಿತರ ಭಕ್ತಾಧಿಗಳು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು