News Karnataka Kannada
Thursday, April 25 2024
ಮೈಸೂರು

ಜೆಡಿಎಸ್ ಕಾರ್ಯಕರ್ತರಿಂದ ಅದ್ಧೂರಿ ರೋಡ್ ಶೋ

Jd(S) workers hold roadshow
Photo Credit : News Kannada

ತಿ.ನರಸೀಪುರ: ಹಾಲಿ ಶಾಸಕ ಎಂ.ಅಶ್ವಿನ್ ಕುಮಾರ್ ಪರ ತಾಲೂಕಿನ ತಲಕಾಡು ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರು ಅದ್ಧೂರಿ ರೋಡ್ ಶೋ ನಡೆಸುವ ಮೂಲಕ ಶಕ್ತಿ ಪ್ರದರ್ಶನ ನಡೆಸಿದರು.

ತಲಕಾಡು ಹೋಬಳಿಯ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಕಾರ್ಯಕರ್ತರು ತಲಕಾಡು – ಮುಡುಕುತೊರೆ ಮುಖ್ಯರಸ್ತೆಯಿಂದ ವಿನಾಯಕ ನಗರ, ರಾಮಮಂದಿರ, ಪೊಲೀಸ್ ಸರ್ಕಲ್ ಮಾರ್ಗವಾಗಿ ಹಳೇ ತಲಕಾಡಿನ ವೈದ್ಯನಾಥೇಶ್ವರ ದೇವಾಲಯದ ಬಳಿ ಅಂತ್ಯಗೊಂಡಿತು. ದಾರಿಯುದ್ದಕ್ಕೂ ಜೆಡಿಎಸ್ ಪರ ಮತ್ತು ಪಕ್ಷದ ಅಭ್ಯರ್ಥಿ ಎಂ.ಅಶ್ವಿನ್ ಕುಮಾರ್ ಗೆ ಮತ ನೀಡುವಂತೆ ಪ್ರಚಾರ ನಡೆಸಲಾಯಿತು.

ದಿನದಿಂದ ದಿನಕ್ಕೆ ಜಿದ್ದಾ ಜಿದ್ದಿನ ಕಣವಾಗಿ ಪರಿವರ್ತನೆಗೊಂಡಿರುವ ತಿ.ನರಸೀಪುರ ಕ್ಷೇತ್ರದಲ್ಲಿ ಹಾಲಿ ಶಾಸಕ ಅಶ್ವಿನ್ ಕುಮಾರ್ ಸರಳ ,ಸಜ್ಜನಿಕೆಗೆ ಮೆಚ್ಚಿ ಎಲ್ಲ ಜನಾಂಗದ ನಾಯಕರು ಅವರ ಬೆಂಬಲಕ್ಕೆ ನಿಂತಿರುವುದು ಇಂದಿನ ಕಾರ್ಯಕ್ರಮವು ಸಾಕ್ಷಿಯಾಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕರೋಹಟ್ಟಿ ಪ್ರಭುಸ್ವಾಮಿ, ಶಾಸಕರ ಲಭ್ಯತೆ ಮತ್ತು ಜನತೆ ಜೊತೆ ಬೆರೆತಿರುವ ಈ ಭಾಗದ ಜನತೆಯೇ ಅವರ ಪರವಾಗಿ ಮತಯಾಚನೆ ಮಾಡುತ್ತಿರುವುದು ವಿಶೇಷ. ಈ ಭಾಗದ ಎಲ್ಲ ಜೊತೆ ಅನೋನ್ಯತೆ, ಸರಳ, ಜಾತ್ಯತೀತ ನಿಲುವಿಂದ ಶಾಸಕರು ಹೆಚ್ಚು ಜನ ಬೆಂಬಲ ಪಡೆದಿದ್ದಾರೆ ಎಂದರು.

ಅಶ್ವಿನ್ ಕುಮಾರ್ ಗೆ ಕ್ಷೇತ್ರದ ಬಗ್ಗೆ ಅಭಿವೃದ್ಧಿಯ ಅಪಾರ ದೂರದೃಷ್ಟಿ ಇದೆ. ಆದರೆ, ಕಳೆದ ಅವಧಿಯಲ್ಲಿ ಕೊರೊನ ಮತ್ತು ಪ್ರವಾಹದಿಂದ ಅವರಿಗೆ ಸರಿಯಾದ ಅವಕಾಶ ಸಿಕ್ಕಿಲ್ಲ. ಈ ಚುನಾವಣೆಯಲ್ಲಿ ಗೆದ್ದು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಮಹದಾಸೆ ಅವರಲ್ಲಿದೆ. ಕ್ಷೇತ್ರದಲ್ಲಿ ಮತಯಾಚನೆ ಮಾಡುವ ಸಂದರ್ಭದಲ್ಲಿ ಸೇರುವ ಜನತೆಯ ಬೆಂಬಲ ಅಶ್ವಿನ್ ಕುಮಾರ್ಅವರಿಗೆ ಗೆಲುವಾಗಿ ಪರಿವರ್ತನೆಗೊಳ್ಳಲಿದೆ ಎಂದರು.

ಪಂಚರತ್ನ ಯೋಜನೆಯಲ್ಲಿ ಅಡಕವಾಗಿದೆ.ಯುವಕರಿಗೆ ಉದ್ಯೋಗ, ಮಹಿಳೆ ಸಬಲೀಕರಣ,ರೈತರ ಉತ್ತೇಜನ, ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಯ ಉನ್ನತೀಕರಣ ಕುಮಾರಸ್ವಾಮಿಯವರ ಕನಸಾಗಿದೆ. ಹಾಗಾಗಿ ಅವರ ಕನಸನ್ನು ನನಸು ಮಾಡಲು ಜೆಡಿಎಸ್ ಪಕ್ಷದ ಅಭ್ಯರ್ಥಿ ಅಶ್ವಿನ್ ಕುಮಾರ್ ಅವರನ್ನು ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ತೊಟ್ಟವಾಡಿ ಮಹದೇವಸ್ವಾಮಿ, ಜೆ.ರಾಜು, ಸತೀಶ್ ನಾಯಕ, ಮಹಿಳಾ ಘಟಕದ ಯೊಶೋಧಮ್ಮ, ಸುಬ್ಬನಾಯಕ, ಹಸ್ತಿಕೇರಿ ನಾಗರಾಜು, ರಾಜೇಶ್ , ಮಾದೇಶ್, ರಂಗನಾಥ್, ರುದ್ರ, ಉಮೇಶ್, ನೌಷಾದ್, ಕುಮಾರನಾಯಕ್, ನಿಂಗರಾಜು, ಅರುಣ್, ಪರಿಣಾಮಿಪುರ ಪ್ರದೀಪ್, ದಳಪತಿ ಆನಂದ್ ಇತರರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು