ಮೈಸೂರು: ವರುಣಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪುಸ್ತಕ ನೀಡಿ ಸನ್ಮಾನಿಸಿ ಗೌರವಿಸಿದರು.
ವರುಣಾ ಕ್ಷೇತ್ರದ ಮುಖಂಡರುಗಳು ಹಾಗೂ ಕಾರ್ಯಕರ್ತರು ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ವೇಳೆ ಹಾರ ತುರಾಯಿಗಳನ್ನು ತೆಗೆದು ಕೊಂಡು ಸನ್ಮಾನಿಸಲು ತೆರಳಿದ್ದ ವೇಳೆ ಸಿದ್ದರಾಮಯ್ಯರವರು ಈ ರೀತಿಯ ಆಡಂಬರದ ಸನ್ಮಾನ ಹಾರ ತುರಾಯಿಗಳಿಗೆ ಹಣ ಪೋಲು ಮಾಡದೇ ಆ ಹಣವನ್ನು ಸದುಪಯೋಗ ಪಡಿಸಿಕೊಂಡು ನನಗೆ ಸನ್ಮಾನಿಸಲು ಬರುವ ಕಾರ್ಯಕರ್ತರು ಕೇವಲ ಪುಸ್ತಕ ನೀಡಿ ಎಂದು ತಿಳಿಸಿದ್ದ ಹಿನ್ನೆಲೆಯಲ್ಲಿ ಈ ಬಾರಿ ವರುಣಾ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ಕರ್ನಾಟಕ ಬೆಳಕು ಎಂಬ ಪುಸ್ತಕವನ್ನು ನೀಡಿ ಸನ್ಮಾನಿಸಿ ಗೌರವಿಸಿದರು.
ಇದೇ ವೇಳೆ ವರುಣಾ ಕ್ಷೇತ್ರದ ಮುಖಂಡರುಗಳಾದ ತುಮ್ಮನೇರಳೆ ಗ್ರಾ.ಪಂ ಸದಸ್ಯ ಬುಲೆಟ್ ಮಹದೇವು, ನಜರ್ಬಾದ್ ನಟರಾಜು, ಲೋಕೇಶ, ಶಂಕರ್, ಮಲ್ಲೇಶ್, ಕೆಂಪಿಸಿದ್ದನಹುಂಡಿ ಕುಮಾರ, ಲೋಕರಂಜನ್, ಮುದ್ದುಮಾದೇಗೌಡ, ಬಿಳಿಗೆರೆ ಗುಂಡಪ್ಪ, ಮಾರೇಗೌಡ, ಡಾ.ಭರತ್, ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಹಾಜರಿದ್ದರು.