News Karnataka Kannada
Friday, March 29 2024
Cricket
ಮೈಸೂರು

ಮೈಸೂರು: ಸಿಎಂ ಸಿದ್ದರಾಮಯ್ಯರಿಗೆ ಪುಸ್ತಕ ನೀಡಿ ಸನ್ಮಾನ

Chief Minister Siddharamaiah was felicitated with a book.
Photo Credit : By Author

ಮೈಸೂರು: ವರುಣಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪುಸ್ತಕ ನೀಡಿ ಸನ್ಮಾನಿಸಿ ಗೌರವಿಸಿದರು.

ವರುಣಾ ಕ್ಷೇತ್ರದ ಮುಖಂಡರುಗಳು ಹಾಗೂ ಕಾರ್ಯಕರ್ತರು ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ವೇಳೆ ಹಾರ ತುರಾಯಿಗಳನ್ನು ತೆಗೆದು ಕೊಂಡು ಸನ್ಮಾನಿಸಲು ತೆರಳಿದ್ದ ವೇಳೆ ಸಿದ್ದರಾಮಯ್ಯರವರು ಈ ರೀತಿಯ ಆಡಂಬರದ ಸನ್ಮಾನ ಹಾರ ತುರಾಯಿಗಳಿಗೆ ಹಣ ಪೋಲು ಮಾಡದೇ ಆ ಹಣವನ್ನು ಸದುಪಯೋಗ ಪಡಿಸಿಕೊಂಡು ನನಗೆ ಸನ್ಮಾನಿಸಲು ಬರುವ ಕಾರ್ಯಕರ್ತರು ಕೇವಲ ಪುಸ್ತಕ ನೀಡಿ ಎಂದು ತಿಳಿಸಿದ್ದ ಹಿನ್ನೆಲೆಯಲ್ಲಿ ಈ ಬಾರಿ ವರುಣಾ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ಕರ್ನಾಟಕ ಬೆಳಕು ಎಂಬ ಪುಸ್ತಕವನ್ನು ನೀಡಿ ಸನ್ಮಾನಿಸಿ ಗೌರವಿಸಿದರು.

ಇದೇ ವೇಳೆ ವರುಣಾ ಕ್ಷೇತ್ರದ ಮುಖಂಡರುಗಳಾದ ತುಮ್ಮನೇರಳೆ ಗ್ರಾ.ಪಂ ಸದಸ್ಯ ಬುಲೆಟ್ ಮಹದೇವು, ನಜರ್‌ಬಾದ್ ನಟರಾಜು, ಲೋಕೇಶ, ಶಂಕರ್, ಮಲ್ಲೇಶ್, ಕೆಂಪಿಸಿದ್ದನಹುಂಡಿ ಕುಮಾರ, ಲೋಕರಂಜನ್, ಮುದ್ದುಮಾದೇಗೌಡ, ಬಿಳಿಗೆರೆ ಗುಂಡಪ್ಪ, ಮಾರೇಗೌಡ, ಡಾ.ಭರತ್, ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು