News Karnataka Kannada
Thursday, March 28 2024
Cricket
ಮೈಸೂರು

ಮೈಸೂರು: ಮತದಾನಕ್ಕೆ 2 ದಿನ ಮುಂಚೆ ಜಿಲ್ಲೆಯನ್ನು ತೊರೆಯಿರಿ

Mysuru: Leave the district two days before the polling
Photo Credit : By Author

ಮೈಸೂರು: ಜಿಲ್ಲೆಯವರು ಅಲ್ಲದ ರಾಜಕೀಯ ಪ್ರತಿನಿಧಿಗಳು ಮತದಾನದ ಎರಡು ದಿನ ಮುಂಚೆ ಜಿಲ್ಲೆಯನ್ನು ಬಿಟ್ಟು ತಮ್ಮ ಜಿಲ್ಲೆಗಳಿಗೆ ಹೋಗಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

ತಮ್ಮ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಹೋಟೆಲ್ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಹೊರಗಡೆಯಿಂದ ಬಂದು ಹಣ ಹಂಚುವುದು ಹಾಗೂ ಚುನಾವಣಾ ಅಕ್ರಮಗಳಲ್ಲಿ ಭಾಗಿಯಾಗುವ ಸಾಧತೆ ಇರುತ್ತದೆ. ಹೊರಗಿನವರಿಗೆ ರೂಂಗಳನ್ನು ನೀಡುವಾಗ ಅವರ ಗುರುತಿನ ಚೀಟಿ ಹಾಗೂ ಅವರು ಬಂದಿರುವ ಉದ್ದೇಶ ತಿಳಿದುಕೊಳ್ಳಬೇಕು. ರಾಜಕೀಯ ಉದ್ದೇಶದಿಂದ ಬಂದಿದ್ದರೆ ಅವರು ಮತದಾನದ ಎರಡು ದಿನ ಮುಂಚೆ ಜಿಲ್ಲೆ ತೊರೆಯಬೇಕು ಎಂದರು.

ಮೇ 10ರಂದು ಮತದಾನ ಇದ್ದು ಮೇ 8ರಂದು ಸಂಜೆ 6ಗಂಟೆಗೆ ಹೊರ ಜಿಲ್ಲೆಯವರು ಜಿಲ್ಲೆ ಬಿಡಬೇಕು. ಹೋಟೆಲ್ ಮಾಲೀಕರು ಈ ಬಗ್ಗೆ ಗಮನ ಹರಿಸಬೇಕು. ಪ್ರವಾಸಕ್ಕೆ ಬರುವವರಿಗೆ ಯಾವುದೇ ನಿರ್ಬಂಧ ಇಲ್ಲ. ತಮ್ಮ ಹೋಟೆಲ್‌ಗಳಲ್ಲಿ ಮತದಾನದ ಮಹತ್ವ ತಿಳಿಸುವ ಪೋಸ್ಟರ್‌ಗಳನ್ನು ಹಾಕಿ. ನೈತಿಕ ಮತದಾನ ಬಗ್ಗೆ ತಮ್ಮ ಸಿಬ್ಬಂದಿ ಮೂಲಕ ಹೋಟೆಲಿಗೆ ಬರುವ ಸಾರ್ವಜನಿಕರಿಗೆ ಅರಿವು ಮೂಡಿಸಿ. ಚುನಾವಣಾ ಅಕ್ರಮದ ಬಗ್ಗೆ ದೂರನ್ನು ಸಿ ವಿಜಿಲ್ ಅಪ್ ನಲ್ಲಿ ದೂರು ಸಲ್ಲಿಸಬಹುದು. ಹೋಟೆಲ್ ಸಿಬ್ಬಂದಿ ಮತದಾನ ಮಾಡಲು ವೇತನ ಸಹಿತ ರಜೆ ನೀಡುವಂತೆ ಹೇಳಿದರು.

ಒಣ ದಿನಗಳಲ್ಲಿ ಮದ್ಯ ಮಾರಾಟ ನಿಷೇಧ ಆಗಿರುತ್ತದೆ. ಈ ಅವಧಿಯಲ್ಲಿ ಮದ್ಯ ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹೋಟೆಲ್‌ಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ದಿನದ ಎಲ್ಲಾ ಸಮಯದಲ್ಲೂ ಚಾಲ್ತಿಯಲ್ಲಿರಬೇಕು. ಜತೆಗೆ 30ದಿನಗಳ ಸಿಸಿ ಟಿವಿ ಫುಟೆಜ್ ಇರಬೇಕು. ನಿರಂತರ ವಿದ್ಯುತ್ ಸೌಲಭ್ಯ ಇರಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಚುನಾವಣಾ ತಹಸೀಲ್ದಾರ್ ರಾಮಪ್ರಸಾದ್ ಸೇರಿದಂತೆ ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು