ನಂಜನಗೂಡು: ಕ್ಷೇತ್ರದ ಜನರೇ ನಮ್ಮತಂದೆ- ತಾಯಿಯಾಗಿದ್ದು, ಅವರ ಸೇವೆಯ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ನಂಜನಗೂಡು ವಿಧಾನಸಭಾ ಕ್ಷೇತ್ರದ ವಿಜೇತ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ ಹೇಳಿದರು.
ನಗೆ ಬೀರಿದ ನಂತರ ಮಾಧ್ಯಮಗಳಿಗೆ ಪ್ರತಿ ಕ್ರಿಯಿಸಿದ ಅವರು, ಗೆಲುವಿಗೆ ನನ್ನ ತಂದೆ ಆರ್. ಧ್ರುವನಾರಾ ಯಣ್ ಆಶೀರ್ವಾದ ಹಾಗೂ ಕ್ಷೇತ್ರದ ಮತದಾರರು, ಕಾರ್ಯಕರ್ತರ ಬೆಂಬಲ ಮುಖ್ಯ ಕಾರಣವಾಗಿದ್ದು, ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಕೂಡಲೇ ಕಾಂಗ್ರೆಸ್ನ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತ ರೊಂದಿಗೆ ಚರ್ಚಿಸಿ ಒಗ್ಗಟ್ಟಿನಿಂದ ಶ್ರಮಪಟ್ಟು ಕೆಲಸ ಮಾಡಿದ್ದು, ನನ್ನ ಬೂತ್ ನನ್ನ ಜವಾಬ್ದಾರಿ ಎಂಬ ನಿಟ್ಟಿನಲ್ಲಿ ಜವಾಬ್ದಾರಿ ವಹಿಸಿ ಕೆಲಸ ಮಾಡಿದ್ದರ ಫಲವಾಗಿ ಜಯಗಳಿಸಲು ಸಾಧ್ಯವಾಗಿದೆ ಎಂದು ನುಡಿದರು. ನಂಜನಗೂಡು ಕ್ಷೇತ್ರದ ಜನತೆಯೂ ಬದಲಾವಣೆ ಬಯಸಿದ್ದರು ಹಾಗೆಯೇ ಬಿಜೆಪಿ ಸರ್ಕಾರ ಭ್ರಷ್ಟಾಚಾರದಿಂದಾಗಿ ಕಾಂಗ್ರೆಸ್ ಪರ ಅಲೆ ಇತ್ತು ನಾನು ವಕೀಲ ನಾಗಿ ಭ್ರಷ್ಟಾಚಾರದ ಬಗ್ಗೆ ಅಧ್ಯಯನ ಮಾಡಿದ್ದೇನೆ. ಭ್ರಷ್ಟಾಚಾರ ವನ್ನು ತಡೆಯುವುದು ಹೇಗೆ ಎಂಬುದನ್ನು ಅರಿತಿದ್ದೇನೆ ಎಂಎಸ್ಸಿ ಪಬ್ಲಿಕ್ ಪಾಲಿಸಿ ಮಾಡಿರುವುದರಿಂದ ಜನಸೇವೆಯ ಜವಾಬ್ದಾರಿ ನಿರ್ವಹಿಸಲು ಅನುಕೂಲವಾಗಲಿದೆ ಎಂದು ನೂತನ ಶಾಸಕ ದರ್ಶನ್ ದೃವನಾರಾಯಣ್ ತಿಳಿಸಿದರು.