News Karnataka Kannada
Saturday, April 20 2024
Cricket
ಮೈಸೂರು

ನಂಜನಗೂಡು: ಶಾಸಕ ಹರ್ಷವರ್ಧನ್ ಪರ ಸಂಸದ ಶ್ರೀನಿವಾಸ್ ಪ್ರಸಾದ್ ಪ್ರಚಾರ

Nanjangud: MP Srinivas Prasad campaigns for MLA Harshavardhan
Photo Credit : By Author

ನಂಜನಗೂಡು: ಇದು ನನ್ನ ಕೊನೆ ಚುನಾವಣೆ, ನಾನು ಶಾಸಕ ಹರ್ಷವರ್ಧನ್ ಪರ ಮತಪ್ರಚಾರಕ್ಕೆ ಬಂದಿರುವುದಾಗಿ ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿದರು.

ಕಳಲೆ ಗ್ರಾಮದಲ್ಲಿ ಕಾರ್ಯಕರ್ತರ ಉದ್ದೇಶಿಸಿ ಮಾತನಾಡಿದ ಅವರು, ಕಳೆದು ಐದು ವರ್ಷಗಳ ಹಿಂದೆ ನಿಮ್ಮ ಮತ ಕೇಳಲು ಬಂದಾಗ ಶಾಸಕ ಹರ್ಷವರ್ಧನ್ ಅವರು ನಿಮಗೆ ಕೊಟ್ಟ ಮಾತಿನಂತೆ ಕಾರ್ಯನಿರ್ವಹಿಸಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಮಾಡುವ ಕಾರ್ಯಗಳು ಸಹ ಇನ್ನೂ ಇವೆ ಅವುಗಳನ್ಮು ಪೂರೈಸಲು ಅವರನ್ನು ಮತ್ತೆ ಶಾಸಕರಾಗಿ ಆಯ್ಕೆ ಮಾಡುವಂತೆ ಹೇಳಿದರು.

ನಿಮ್ಮ ಕ್ಷೇತ್ರದ ಅಭಿವೃದ್ಧಿಗೆ ಸುಮಾರು 800 ಕೋಟಿ ರೂಪಾಯಿ ಅನುದಾನವನ್ನು ಶಾಸಕರು ತಂದಿದ್ದಾರೆ. ನಗರದಲ್ಲಿ ಸಿಸಿ ರಸ್ತೆ, ಸಮುದಾಯ ಭವನ, ಚರಂಡಿ‌ ನಿರ್ಮಾಣ, ಶಾಲಾ ಕೊಠಡಿ, ನುಗು ಏತ ನೀರಾವರಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಹರ್ಷವರ್ಧನ್ ಅವರನ್ನು ಮತ್ತೊಮ್ಮೆ ಶಾಸಕನಾಗಿ ಆಯ್ಕೆ ಮಾಡುವಂತೆ ಕ್ಷೇತ್ರದ ಮತದಾರಲ್ಲಿ ಮನವಿ ಮಾಡಿದರಲ್ಲದೆ, ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಹರ್ಷವರ್ಧನ್ ಅವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯ ಮತ್ತು ಅನುದಾನ ಬಳಕೆಯನ್ನು ಕ್ಷೇತ್ರಕ್ಕೆ ಬಂದಾಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ ಮೆಚ್ಚಿಕೊಂಡಿದ್ದಾರೆ ಎಂದು ಸಂಸದರು ತಿಳಿಸಿದರು.

ಶಾಸಕ ಹರ್ಷವರ್ಧನ್ ಮಾತನಾಡಿ ಅಂಬೇಡ್ಕರ್ ಸಮುದಾಯ ಭವನ, ಸಿಸಿ ರಸ್ತೆ, , ಆಸ್ಪತ್ರೆ ಸುಮಾರು ಹಲವು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾಡಲಾಗಿದೆ. ಅಭಿವೃದ್ಧಿ ಕಾರ್ಯ ನೋಡಿ ನನ್ನ ಗೆಲುವಿಗೆ ನಿಮ್ಮ ಮತ ನೀಡಿ ಮತದಾರರಲ್ಲಿ ಸಮಾರಂಭದಲ್ಲಿ ಮನವಿ ಮಾಡಿದರು.

ಬಿಜೆಪಿ ಮುಖಂಡ ಸುಬ್ಬಣ್ಣ, ಚಿಕ್ಕ ರಂಗ ನಾಯಕ, ಬಳುಗುಂಡಿ ಮಹದೇವಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಮಹೇಶ್, ಬಿಜೆಪಿ ಮುಖಂಡ ಮಲ್ಲಿಕಾರ್ಜುನ್, ಪ್ರಕಾಶ್, ಬದನವಾಳ್ ರಾಮು., ಮಹದೇವ ನಾಯಕ ಮತ್ತು ಕಳಲೆ ಗ್ರಾಮಸ್ಥರು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು