ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೆ ಜಿಲ್ಲೆಗೆ ಆಗಮಿಸುತ್ತಿದ್ದು, ಮೇ 7ರಂದು ಬೃಹತ್ ಸಮಾವೇಶ ನಡೆಸಲಿದ್ದಾರೆ.
ಅಂದು ಸಂಜೆ 5ಗಂಟೆಗೆ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾ 766ರ ಸಮೀಪ ಇರುವ ಎಲಚೆಗೆರೆ ಗೇಟ್ ಬಳಿ ಸಮಾವೇಶ ನಡೆಯಲಿದ್ದು, ಸಮಾವೇಶ ನಡೆಯುವ ವೇದಿಕೆ, ಹೆಲಿಪ್ಯಾಡ್ ಹಾಗೂ ಇನ್ನಿತರೆ ವ್ಯವಸ್ಥೆಗಳ ಬಗ್ಗೆ ಶಾಸಕ ಎಸ್.ಎ.ರಾಮದಾಸ್ ಮತ್ತು ಸಂಸದ ಪ್ರತಾಪ್ ಸಿಂಹ, ಬಿಹಾರದ ರಾಜ್ಯಸಭಾ ಸದಸ್ಯ ವಿವೇಕ್ ಠಾಕೂರ್, ಎಂಎಲ್ಸಿ ಕೇಶವಪ್ರಸಾದ್, ಮೈ.ವಿ.ರವಿಶಂಕರ್, ಸುರೇಶ್ ಬಾಬು, ಡಾ.ಶಿವರಾಂ, ಡಾ.ಹರ್ಷವರ್ಧನ್, ಶ್ರೀನಿವಾಸ್ ರೆಡ್ಡಿ, ಸಂಜಯ್ ಶರ್ಮ ಉಪಸ್ಥಿತಿಯೊಂದಿಗೆ ಪೂರ್ವಬಾವಿ ಸಭೆ ನಡೆಯಿತು.
ಕಾರ್ಯಕ್ರಮ ನಡೆಯುವ ಸ್ಥಳವನ್ನು ಎಸ್ಪಿಜಿ ಯವರು ಪರಿಶೀಲಿಸಿ ಅಂತಿಮಗೊಳಿಸಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ, ಪೊಲೀಸ್, ಕಂದಾಯ, ಎಸ್.ಪಿ.ಜಿ ಯ ಅಧಿಕಾರಿಗಳು ಉಪಸ್ಥಿತರಿದ್ದರು.