News Karnataka Kannada
Saturday, April 20 2024
Cricket
ಮೈಸೂರು

ನಂಜನಗೂಡು: ನೀರಿಲ್ಲದೆ ಒಣಗುತ್ತಿರುವ ಭತ್ತದ ಬೆಳೆ

Paddy crop drying up due to lack of water
Photo Credit : News Kannada

ನಂಜನಗೂಡು: ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ನೀರಿಲ್ಲದೆ ಭತ್ತದ ಬೆಳೆ ಒಣಗುತ್ತಿವೆ ಕೂಡಲೇ ಬೆಳೆಗಳಿಗೆ ನೀರು ಬಿಡುವಂತೆ ರೈತರು ಒತ್ತಾಯಿಸಿದ್ದಾರೆ.

ಹುಲ್ಲಹಳ್ಳಿ ಮತ್ತು ಕಣೇನೂರು ಭಾಗದ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಭತ್ತದ ಬೆಳೆಯನ್ನು ನಾಟಿ ಮಾಡಿದ್ದು ಕಳೆದ 20 ದಿನಗಳಿಂದ ಹಲಸೂರು ನಾಲೆಗೆ ಸಮರ್ಪಕವಾಗಿ ನೀರನ್ನು ಬಿಡದೆ ಬೆಳೆಗಳು ಒಣಗುತ್ತಿವೆ.

ಭತ್ತದ ಬೆಳೆಯು ಗರ್ಭ ಕಟ್ಟುವ ವೇಳೆ ನೀರು ಬಿಡದೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಈಗಾಗಲೇ ಬೆಳೆಗಳಿಗೆ ನೀರನ್ನು ಬಿಟ್ಟಿಲ್ಲ ಬೀರ್ವಾಳ್ ಡ್ಯಾಮ್ ನಲ್ಲಿ 95 ಅಡಿ ನೀರು ಇದೆ ನೀರು ಬಿಡುವಂತೆ ಅಧಿಕಾರಿಗಳಿಗೆ ತಿಳಿಸಿದರು ಉಡಾಫೆಯಿಂದ ಉತ್ತರಿಸುತ್ತಾರೆ ರೈತರಿಗೆ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ನಮಗೆ ಕಚೇರಿಗಳಿಗೆ ಅಲೆದಾಡಿ ಸಾಕಾಗಿದೆ ಭತ್ತದ ಬೆಳೆಗೆ ನೀರು ಬಿಡದೆ ಇರುವುದರಿಂದ ರೈತರಿಗೆ ನಷ್ಟವಾಗುತ್ತದೆ ಇದಕ್ಕೆ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ ನಷ್ಟ ಅನುಭವಿಸುವ ರೈತರಿಗೆ ಅಧಿಕಾರಿಗಳೇ ನಮಗೆ ನಷ್ಟವನ್ನು ಬರಿಸಬೇಕು ಕೂಡಲೇ ಭತ್ತದ ಬೆಳೆಗೆ ನೀರು ಬಿಡಬೇಕು ಇಲ್ಲವಾದಲ್ಲಿ ಮುಖ್ಯಮಂತ್ರಿಗಳಿಗೆ ಅರ್ಜಿಯನ್ನು ಬರೆಯುತ್ತೇನೆ ಎಂದು ರೈತ ಶಿವರಾಮೇಗೌಡ ಎಚ್ಚರಿಕೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು