ನಂಜನಗೂಡು: ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ನೀರಿಲ್ಲದೆ ಭತ್ತದ ಬೆಳೆ ಒಣಗುತ್ತಿವೆ ಕೂಡಲೇ ಬೆಳೆಗಳಿಗೆ ನೀರು ಬಿಡುವಂತೆ ರೈತರು ಒತ್ತಾಯಿಸಿದ್ದಾರೆ.
ಹುಲ್ಲಹಳ್ಳಿ ಮತ್ತು ಕಣೇನೂರು ಭಾಗದ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಭತ್ತದ ಬೆಳೆಯನ್ನು ನಾಟಿ ಮಾಡಿದ್ದು ಕಳೆದ 20 ದಿನಗಳಿಂದ ಹಲಸೂರು ನಾಲೆಗೆ ಸಮರ್ಪಕವಾಗಿ ನೀರನ್ನು ಬಿಡದೆ ಬೆಳೆಗಳು ಒಣಗುತ್ತಿವೆ.
ಭತ್ತದ ಬೆಳೆಯು ಗರ್ಭ ಕಟ್ಟುವ ವೇಳೆ ನೀರು ಬಿಡದೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಈಗಾಗಲೇ ಬೆಳೆಗಳಿಗೆ ನೀರನ್ನು ಬಿಟ್ಟಿಲ್ಲ ಬೀರ್ವಾಳ್ ಡ್ಯಾಮ್ ನಲ್ಲಿ 95 ಅಡಿ ನೀರು ಇದೆ ನೀರು ಬಿಡುವಂತೆ ಅಧಿಕಾರಿಗಳಿಗೆ ತಿಳಿಸಿದರು ಉಡಾಫೆಯಿಂದ ಉತ್ತರಿಸುತ್ತಾರೆ ರೈತರಿಗೆ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ನಮಗೆ ಕಚೇರಿಗಳಿಗೆ ಅಲೆದಾಡಿ ಸಾಕಾಗಿದೆ ಭತ್ತದ ಬೆಳೆಗೆ ನೀರು ಬಿಡದೆ ಇರುವುದರಿಂದ ರೈತರಿಗೆ ನಷ್ಟವಾಗುತ್ತದೆ ಇದಕ್ಕೆ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ ನಷ್ಟ ಅನುಭವಿಸುವ ರೈತರಿಗೆ ಅಧಿಕಾರಿಗಳೇ ನಮಗೆ ನಷ್ಟವನ್ನು ಬರಿಸಬೇಕು ಕೂಡಲೇ ಭತ್ತದ ಬೆಳೆಗೆ ನೀರು ಬಿಡಬೇಕು ಇಲ್ಲವಾದಲ್ಲಿ ಮುಖ್ಯಮಂತ್ರಿಗಳಿಗೆ ಅರ್ಜಿಯನ್ನು ಬರೆಯುತ್ತೇನೆ ಎಂದು ರೈತ ಶಿವರಾಮೇಗೌಡ ಎಚ್ಚರಿಕೆ ನೀಡಿದ್ದಾರೆ.