ನಂಜನಗೂಡು: ಸುಂಟರಗಾಳಿಗೆ ಮನೆ ಮತ್ತು ಅಂಗಡಿಗಳ ಮೇಲ್ಚಾವಣಿ ಹಾರಿ ಹೋಗಿರುವ ಘಟನೆ ನಂಜನಗೂಡು ತಾಲೂಕಿನ ಗೆಜ್ಜಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಾತ್ರಿಯ ಸಮಯದಲ್ಲಿ ಬಿರುಗಾಳಿಯ ಸುಂಟರಗಾಳಿಗೆ ಸುಮಾರು ಐದು ಮನೆಗಳು ಮತ್ತು ಅಂಗಡಿಗಳ ಮೇಲ್ಚಾವಣಿ ಮುರಿದು ಬಿದ್ದಿವೆ. ಗ್ರಾಮದ ನಿಂಗರಾಜು, ಚೆಲುವರಾಯ, ನಂಜುಂಡೇಗೌಡ, ಸಿದ್ದಾಚಾರಿ, ಸಿದ್ದಮ್ಮ, ರಾಜೇಶ್ ಸೇರಿದಂತೆ ಸುಮಾರು ಐದು ಮನೆಗಳ ಮೇಲ್ಚಾವಣಿ ಹಾರಿ ಹೋಗಿ ಗೋಡೆಗಳು ಕುಸಿದು ಬಿದ್ದಿವೆ. ಅಂಗಡಿಯಲ್ಲಿದ್ದೆ ದವಸ ಧಾನ್ಯಗಳು ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಯಾಗಿದ್ದು ಸುಮಾರು 10 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ವಿಷಯ ತಿಳಿದ ಸ್ಥಳಕ್ಕೆ ತಾಯೂರು ಗ್ರಾಮ ಪಂಚಾಯಿತಿಯ ಸದಸ್ಯರಾದ ವಿಟ್ಟಲ್, ಶಿವಣ್ಣ, ರಾಜೇಶ್, ಸ್ವಾಮಿ ಅಂಕಶಟ್ಟಿ, ಬಂಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಷ್ಟ ಅನುಭವಿಸಿದ ನಿವಾಸಿಗಳಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯ ಮಾಡಿದರು. ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಸೂಕ್ತ ಪರಿಹಾರವನ್ನು ನೀಡುತ್ತೇವೆ ಎಂದು ಗ್ರಾಮ ಪಂಚಾಯತಿಯ ಸದಸ್ಯರುಗಳು ಭರವಸೆ ನೀಡಿದರು.