News Karnataka Kannada
Thursday, April 25 2024
Cricket
ಮೈಸೂರು

ನಂಜನಗೂಡು: ಸುಂಟರಗಾಳಿಗೆ ಹಾರಿ ಹೋದ ಮನೆ, ಅಂಗಡಿಗಳ ಮೇಲ್ಚಾವಣಿ, ಅಪಾರ ನಷ್ಟ

Roofs of houses and shops blown away by tornadoes, huge loss
Photo Credit : News Kannada

ನಂಜನಗೂಡು: ಸುಂಟರಗಾಳಿಗೆ ಮನೆ ಮತ್ತು ಅಂಗಡಿಗಳ ಮೇಲ್ಚಾವಣಿ ಹಾರಿ ಹೋಗಿರುವ ಘಟನೆ ನಂಜನಗೂಡು ತಾಲೂಕಿನ ಗೆಜ್ಜಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ರಾತ್ರಿಯ ಸಮಯದಲ್ಲಿ ಬಿರುಗಾಳಿಯ ಸುಂಟರಗಾಳಿಗೆ ಸುಮಾರು ಐದು ಮನೆಗಳು ಮತ್ತು ಅಂಗಡಿಗಳ ಮೇಲ್ಚಾವಣಿ ಮುರಿದು ಬಿದ್ದಿವೆ. ಗ್ರಾಮದ ನಿಂಗರಾಜು, ಚೆಲುವರಾಯ, ನಂಜುಂಡೇಗೌಡ, ಸಿದ್ದಾಚಾರಿ, ಸಿದ್ದಮ್ಮ, ರಾಜೇಶ್ ಸೇರಿದಂತೆ ಸುಮಾರು ಐದು ಮನೆಗಳ ಮೇಲ್ಚಾವಣಿ ಹಾರಿ ಹೋಗಿ ಗೋಡೆಗಳು ಕುಸಿದು ಬಿದ್ದಿವೆ. ಅಂಗಡಿಯಲ್ಲಿದ್ದೆ ದವಸ ಧಾನ್ಯಗಳು ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಯಾಗಿದ್ದು ಸುಮಾರು 10 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ವಿಷಯ ತಿಳಿದ ಸ್ಥಳಕ್ಕೆ ತಾಯೂರು ಗ್ರಾಮ ಪಂಚಾಯಿತಿಯ ಸದಸ್ಯರಾದ ವಿಟ್ಟಲ್, ಶಿವಣ್ಣ, ರಾಜೇಶ್, ಸ್ವಾಮಿ ಅಂಕಶಟ್ಟಿ, ಬಂಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಷ್ಟ ಅನುಭವಿಸಿದ ನಿವಾಸಿಗಳಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯ ಮಾಡಿದರು. ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಸೂಕ್ತ ಪರಿಹಾರವನ್ನು ನೀಡುತ್ತೇವೆ ಎಂದು ಗ್ರಾಮ ಪಂಚಾಯತಿಯ ಸದಸ್ಯರುಗಳು ಭರವಸೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು