ವರುಣ: ವಿಧಾನಸಭಾ ಕ್ಷೇತ್ರದ ದುದ್ದಗೆರೆ ಗ್ರಾಮದ ಗಿರಿಬೆಟ್ಟದ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ದೇಹದ ಸುತ್ತಲೂ ಕಬ್ಬಿಣದ ಜಾಲರಿಯನ್ನು ಸುತ್ತಿ, ಹಗ್ಗ ಹಾಗೂ ತಂತಿಯಿಂದ ಕಟ್ಟಿ ಕೆರೆಯ ನೀರಿನಲ್ಲಿ ಮಗ್ಗಲಾಗಿ ಮಲಗಿಸಿ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.
ಯಾವುದೋ ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿ, ಕೆರೆಗೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಎಎಸ್ ಪಿ ನಂದಿನಿ, ಡಿವೈಎಸ್ಪಿ ಶಿವಕುಮಾರ್, ವರುಣ ಪೊಲೀಸ್ ಠಾಣೆಯ ಪಿಎಸ್ಐ ಆರ್.ಚೇತನ್, ಸಿಬ್ಬಂದಿಗಳಾದ ಕುಮಾರ್, ಸಿದ್ದರಾಜು, ಶ್ರೀನಿವಾಸ್, ಯೋಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಳೆತ ಸ್ಥಿತಿಯಲ್ಲಿರುವ ಅಪರಿಚಿತ ವ್ಯಕ್ತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.
ಈ ಸಂಬಂಧ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.