News Karnataka Kannada
Friday, March 29 2024
Cricket
ಸಂಪಾದಕರ ಆಯ್ಕೆ

ದೇಶದ ಆಂತರಿಕ ಭದ್ರತೆಯ ವಿಷಯದಲ್ಲಿ ಎನ್‌ಐಎ ಪಾತ್ರ ಬಹುಮುಖ್ಯವಾದದ್ದು: ಅಮಿತ್‌ ಶಾ

Manipur violence: Amit Shah calls all-party meet on June 24
Photo Credit :

ಇಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನ್ನ 13 ನೇ ಸಂಸ್ಥಾಪನಾ ದಿನಾಚರಣೆಯನ್ನು ಅಚರಿಸಿಕೊಳ್ಳುತ್ತಿದೆ. ದೇಶದ ಆಂತರಿಕ ಭದ್ರತೆಯ ವಿಷಯದಲ್ಲಿ ಎನ್‌ಐಎ ಪಾತ್ರ ಬಹುಮುಖ್ಯವಾದದ್ದು. ಈ ಸಂದರ್ಭದಲ್ಲಿ ಮಾತನಾಡಿರುವ ಗೃಹಸಚಿವ ಅಮಿತ್‌ ಶಾ ಎನ್‌ಐಎ ಕಾರ್ಯದಕ್ಷತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎನ್‌ಐಎ ಭಯೋತ್ಪಾದನೆಯ ವಿರುದ್ಧ ಹೇಗೆ ಹೋರಾಡುತ್ತಿದೆ ಎಂಬುದನ್ನು ಅವರು ಹೀಗೆ ವಿವರಿಸಿದ್ದಾರೆ.

• ಭಯೋತ್ಪಾದನೆಯ ವಿಷಯದಲ್ಲಿ ಭಯೋತ್ಪಾದನೆಯ ವಿರುದ್ಧ ಹೋರಾಡುವುದು ಒಂದು ಕಡೆಯಾದರೆ ಭಯೋತ್ಪಾದನೆಯನ್ನು ಬುಡ ಸಮೇತ ನಾಶಪಡಿಸುವುದು ಇನ್ನೊಂದು ಕಡೆ. ಅದನ್ನು ಸಾಧಿಸಲು ನಾವು ಮೊದಲು ಭಯೋತ್ಪಾದನೆಗೆ ಆರ್ಥಿಕ ಸಹಾಯ ಮಾಡುವವರನ್ನು ಮಟ್ಟ ಹಾಕಬೇಕು.

• ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರಿಗೆ ʼಫಂಡಿಂಗ್ʼ ಮಾಡುತ್ತಿದ್ದ ಹಲವು ಪ್ರಕರಣಗಳನ್ನು ಎನ್‌ಐಎ ದಾಖಲಿಸಿದೆ. ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ಹತ್ತಿಕ್ಕುವಲ್ಲಿ ಇವು ಹೆಚ್ಚಿನ ಸಹಾಯ ಮಾಡಿದೆ ಜೊತೆಗೆ ಉಗ್ರರರಿಗೆ ಸುಲಭವಾಗಿ ಹಣ ಸಂದಾಯವಾಗುವುದನ್ನು ತಡೆಯಲಾಗಿದೆ.

• 2020-21 ರಲ್ಲಿ ಭಯೋತ್ಪಾದನಾ ಸಂಘಟನೆಗೆಳಿಗೆ ಸೇರಿದ ಹಲವು ʼಗ್ರೌಂಡ್‌ ಲೆವೆಲ್‌ʼ ಕೆಲಸಗಾರರನ್ನು ಪತ್ತೆಹಚ್ಚಿ ಅವರ ವಿರುದ್ಧ ಪ್ರಕರಣದಾಖಲಿಸಲಾಗಿದೆ ಮತ್ತು ಅನೇಕ ಸ್ಲೀಪರ್ ಸೆಲ್‌ಗಳನ್ನು ಯಶಸ್ವಿಯಾಗಿ ನಾಶಪಡಿಸಲಾಗಿದೆ.

• ಇದರಿಂದಾಗಿ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ ಸಾಗಣೆ ಮತ್ತು ಇತರೇ ವಸ್ತುಗಳ ಪೂರೈಕೆಗೆ ಭಾರಿ ಹೊಡೆತವುಂಟಾಗಿದೆ. ಸಾಮಾಜಿಕವಾಗಿ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದ್ದ ಹಲವರನ್ನು ಬಂಧಿಸಿ ಕಾನೂನಿಗೆ ಒಪ್ಪಿಸಲಾಗಿದೆ.

• ಇದರ ಜೊತೆಗೆ ಮಾವೋವಾದಿಗಳಿಗೆ ಹಣಸಹಾಯ ಮಾಡುತ್ತಿರುವ ಹಲವು ಪ್ರಕರಣಗಳ ಕುರಿತು ತನಖೆ ನಡೆಸಲಾಗುತ್ತಿದೆ.
• ಇಲ್ಲಿಯವರೆಗ ಉಗ್ರರಿಗೆ ಹಣಸಹಾಯ ಮಾಡುವ ಒಟ್ಟು 105 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, 876 ಆರೋಪಿಗಳನ್ನು ಒಳಗೊಂಡ 94 ಪ್ರಕರಣಗಳ ಚಾರ್ಜ್‌ಶೀಟ್ ಮಾಡಲಾಗಿದೆ. ಸುಮಾರು 100 ಆರೋಪಿಗಳಿಗೆ ಶಿಕ್ಷೆಯಾಗಿದೆ.

• ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದ್ದು ಮಾದಕ ವಸ್ತುಗಳ ಸಾಗಣೆ, ನಕಲಿನೋಟು ಸಾಗಣೆ, ಶಸ್ತ್ರಾಸ್ತ್ರ ಸಾಗಣೆ, ಹವಾಲಾ ದಂಧೆ,ಬಾಂಬ್‌ ಸ್ಫೋಟ ಗಳಂತಹ ವಿಷಯಗಳ ಕುರಿತಾಗಿ ಡೇಟಾ ಬೇಸ್‌ ನಿರ್ಮಿಸಲಾಗುತ್ತಿದೆ.

• ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ರಾಜ್ಯಗಳನ್ನು ಸಂಪರ್ಕಿಸಿ ಈ ಡೇಟಾಬೇಸ್‌ ಅನ್ನು ಇನ್ನಷ್ಟು ಬಲಪಡಿಸಿ ದೇಶದ ಅಂತರಿಕ ಸುರಕ್ಷತೆಯಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತದೆ.

• ಭಯೋತ್ಪಾದಕ ಸಂಘಟನೆಗಳು ಯುವಕರನ್ನು ಸೇರಿಸಿಕೊಳ್ಳುತ್ತಿರುವ ಕುರಿತು ನಿಗಾವಹಿಸಲಾಗುತ್ತಿದೆ.

• ಸಂಸ್ಥೆಯು ಪ್ರಾರಂಭವಾದಾಗಿನಿಂದ ಸುಮಾರು 400 ಪ್ರಕರಣಗಳನ್ನು ದಾಖಲಿಸಿದೆ. 349 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. 2,494 ಜನರನ್ನು ಬಂಧಿಸಲಾಗಿದೆ, ಅದರಲ್ಲಿ 391 ಜನರನ್ನು ಅಪರಾಧಿಗಳೆಂದು ಗುರುತಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು