ಹೊಸದಿಲ್ಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಹಾಗೂ ಎರಡು ಟಿ-20 ಪಂದ್ಯಗಳನ್ನು ಒಳಗೊಂಡ ಜಿಂಬಾಬ್ವೆ ಕಿರು ಪ್ರವಾಸದ ಭಾರತದ ಕ್ರಿಕೆಟ್ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವ ವಹಿಸಲಿದ್ದು, ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳುವ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವವನ್ನು ವಿರಾಟ್ ಕೊಹ್ಲಿ ವಹಿಸಲಿದ್ದಾರೆ.
ಸಂದೀಪ್ ಪಾಟೀಲ್ ನೇತೃತ್ವದ ಭಾರತದ ರಾಷ್ಟ್ರೀಯ ಆಯ್ಕೆದಾರರ ತಂಡ ಇಂದು ಮುಂಬಯಿಯಲ್ಲಿ ಸಭೆ ಸೇರಿ ಉಭಯ ಪ್ರವಾಸಗಳ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಿತು. ಎಂ ಎಸ್ ಧೋನಿ (ಕ್ಯಾಪ್ಟನ್), ಕೆ ಎಲ್ ರಾಹುಲ್, ಫೈಜ್ ಫಝಾಲ್, ಮನೀಶ್ ಪಾಂಡೆ, ಕರುಣ್ ನಾಯರ್, ಅಂಬಾಟಿ ರಾಯುಡು, ಆರ್ ಧವನ್, ಅಕ್ಷರ್ಪಟೇಲ್, ಜಯಂತ್ ಯಾದವ್, ಧವಳ್ ಕುಲಕರ್ಣಿ, ಜೆ ಬುಮ್ರಾ, ಬರೀಂದರ ಸ್ರನ್, ಮನದೀಪ್ ಸಿಂಗ್, ಕೇದಾರ್ ಜಾಧವ್, ಜಯದೇವ್ ಉನಾದ್ಕತ್, ಯಜುವೇಂದ್ರ ಚಹಾಲ್ ಜಿಂಬಾಬ್ವೆ ಪ್ರವಾಸ ಕೈಗೊಳ್ಳುವ ಭಾರತೀಯ ತಂಡವಾಗಿದೆ.
ಮುಂಬಯಿಯ ವೇಗದ ಎಸೆಗಾರ ಶಾರ್ದೂಲ್ ಠಾಕೂರ್ ಅವರು ವೆಸ್ಟಿಂಡೀಸ್ ಪ್ರವಾಸ ಕೈಗೊಳ್ಳುವ 17 ಸದಸ್ಯರ ಭಾರತ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಪ್ರವೇಶ ಪಡೆದಿರುವ ಏಕೈಕ ಹೊಸ ಆಟಗಾರನಾಗಿದ್ದಾರೆ.
ವಿರಾಟ್ ಕೊಹ್ಲಿ (ಕ್ಯಾಪ್ಟನ್) ಮುರಳಿ ವಿಜಯ್, ಶಿಖರ್ಧವನ್, ಕೆ ಎಲ್ ರಾಹುಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ವೃದ್ಧಿಮಾನ್ ಸಹಾ, ಅಮಿತ್ ಮಿಶ್ರಾ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಇಶಾಂತ್ ಶರ್ಮಾ, ಶಮೀ, ಬಿ ಕುಮಾರ್, ಉಮೇಶ್ ಯಾದವ್, ಶಾರ್ದೂಲ್ ಠಾಕೂರ್, ಸ್ಟುವರ್ಟ್ ಬಿನ್ನಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳುವ ಭಾರತೀಯ ತಂಡವಾಗಿದೆ.