ಮುಜಾಫರ್ ನಗರ: ರಾಷ್ಟ್ರ ಮಟ್ಟದ ಬಾಕ್ಸರ್ ಒಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು ಅವರ ಮೃತದೇಹ ಮುಜಾಫರ್ ನಗರ ಜಿಲ್ಲೆಯ ಗಂಗಾ ಕಾಲುವೆಯಲ್ಲಿ ಬುಧವಾರ ಸಂಜೆ ಪತ್ತೆಯಾಗಿದೆ.
21 ವರ್ಷದ ಅಭಿಶೇಕ್ ಶರ್ಮ ಮೃತ ದುರ್ದೈವಿ, ಖಾಟೋಲಿ ನಗರದ ಇವರು ಸ್ನಾನ ಮಾಡಲು ತೆರಳಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಜುಲೈ 20 ರಂದು ನಡೆಯುವ ಟೂರ್ನಮೆಂಟ್ ನಲ್ಲಿ ಅಭಿಷೇಕ್ ಭಾಗವಹಿಸಬೇಕಿತ್ತು ಎಂದು ಆತನ ಕುಟುಂಬಸ್ಥರು ತಿಳಿಸಿದ್ದಾರೆ.