ಇಟಾನಗರ: ದೇಶದಲ್ಲಿ ಅನೇಕ ಮಂದಿ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಅರುಣಾಚಲಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ಜನರನ್ನು ಆಕರ್ಷಿಸಲು ಹೊಸದೊಂದು ದಾರಿಯನ್ನು ಹುಡುಕಿದ್ದಾರೆ.
ಜನರು ಕೋವಿಡ್ ಲಸಿಕೆ ಪಡೆಯುವುದನ್ನು ಉತ್ತೇಜಿಸಲು ಲಸಿಕೆ ಪಡೆದವರಿಗೆ 20 ಕೆ.ಜಿ ಉಚಿತ ಅಕ್ಕಿಯ ಮಾಡಿದೆ ನೀಡುವುದಾಗಿ ಘೋಷಿಸಿದ್ದಾರೆ.
ಈ ಘೋಷಣೆಯಿಂದ ಅರುಣಾಚಲ ಪ್ರದೇಶದ ಆಡಳಿತ ವಲಯದ ಗ್ರಾಮಸ್ಥರಲ್ಲಿ ವ್ಯಾಕ್ಸಿನೇಷನ್ ಬಗ್ಗೆ ವದಂತಿಗಳನ್ನು ಹೋಗಲಾಡಿಸುವ ನಿರೀಕ್ಷೆಯು ಸಾಕಷ್ಟು ಲಾಭದಾಯಕವಾಗಿದೆ.ಏಕೆಂದರೆ, 80 ಕ್ಕೂ ಹೆಚ್ಚು ಜನರು ಈ ಘೋಷಣೆಯಾದ ಕೆಲವೇ ದಿನಗಳಲ್ಲಿ ಲಸಿಕೆ ಹಾಕಿಸಿಕೊಳ್ಳಲು ಕಾಲ್ನಡಿಗೆಯಲ್ಲಿ ಬಂದಿದ್ದಾರೆ.
ಸುಬನ್ಸಿರಿ ಜಿಲ್ಲೆಯ ಯಜಾಲಿಯ ವೃತ್ತಾಧಿಕಾರಿ ತಾಶಿ ವಾಂಗ್ಚುಕ್ ಥೊಂಗ್ಡಾಕ್ ಅವರು ಈ ಉಪಾಯ ಮಾಡಿದ್ದು, ಲಸಿಕೆ ಹಾಕಿಸಿಕೊಳ್ಳುವ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ಅಕ್ಕಿ ನೀಡುವಿಕೆಯನ್ನು ಪ್ರಾರಂಭಿಸಿದ್ದಾರೆ.
‘ಲಸಿಕೆ ವಿತರಣೆ ಸುಧಾರಿಸಲು ನಮ್ಮ ವೃತ್ತ ಮತ್ತು ಜಿಲ್ಲೆಯಲ್ಲಿ ನಾವು ನಿರಂತರವಾಗಿ ಕಾರ್ಯತಂತ್ರಗಳನ್ನು ರೂಪಿಸಲು ಪ್ರಯತ್ನಿಸುತ್ತಿದ್ದೇವೆ.ಯಜಾಲಿ ವೃತ್ತದಲ್ಲಿ 45 ವರ್ಷಕ್ಕೂ ಮೇಲ್ಪಟ್ಟ 1,399 ಜನರಿದ್ದಾರೆ’ ಎಂದು ಅಧಿಕಾರಿ ಹೇಳಿದ್ದಾರೆ.