ನವದೆಹಲಿ: ಎಸ್ ಸಿ ಎಸ್ ಟಿ ಕಾಯ್ದೆಯಲ್ಲಿ ಮಾಡಿರುವಂತಹ ತಿದ್ದುಪಡಿಗೆ ತಡೆ ಹೇರಲು ಸುಪ್ರೀಂಕೋರ್ಟ್ ಮತ್ತೊಮ್ಮೆ ನಿರಾಕರಿಸಿದೆ.
ನಿರೀಕ್ಷಣಾ ಜಾಮೀನು ಇಲ್ಲದಿರುವ ಅವಕಾಶವನ್ನು ಪುನರ್ ಸ್ಥಾಪಿಸುವ ಎಸ್ ಸಿ ಎಸ್ ಟಿ ಕಾಯ್ದೆ ತಿದ್ದುಪಡಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿರುವ ಕೋರ್ಟ್, ಫೆ. 19ಕ್ಕೆ ಕೇಂದ್ರ ಸರ್ಕಾರದ ಪುನರ್ ವಿಮರ್ಶೆ ಮನವಿ ಸಹಿತ ಎಲ್ಲವನ್ನು ವಿಚಾರಣೆ ನಡೆಸಲಿದೆ.
ಜಸ್ಟಿಸ್ ಯು ಯು ಲಲಿತ್ ನೇತೃತ್ವದ ಪೀಠವು ಮುಂದಿನ ವಿಚಾರಣೆ ವೇಳೆ ಎಲ್ಲಾ ವಿಚಾರಗಳನ್ನು ಪರಿಶೀಲಿಸುವುದಾಗಿ ತಿಳಿಸಿದೆ.