ಹೊಸಪೇಟೆ ; ಮದುವೆ ಕಾರ್ಯಕ್ರಮಗಳಿಗೆ ನಿಷೇಧವಿದ್ದರೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನಿಲುವಂಜಿ ಗ್ರಾಮದಲ್ಲಿ ಮದುವೆ ಕಾರ್ಯಕ್ರಮ ನೆರವೇರಿಸಿದ ವೈದ್ಯರಾದ ವಧು ಮತ್ತು ವರ ಸೇರಿ ಐವರ ಮೇಲೆ ಗುರುವಾರ ದೂರು ದಾಖಲಾಗಿದೆ. ನಿಲುವಂಜಿ ಗ್ರಾಮದ ಎನ್.ಬಸವರಾಜ್, ಕಮಲಮ್ಮ, ಬಸವರಾಜ್, ವಧು ಖಾಸಗಿ ವೈದ್ಯೆ ಡಾ. ಬಸವರಾಜೇಶ್ವರಿ (ಡಾ. ನಿಧಿ), ವರ ಡಾ. ಹೆಚ್.ಬಿ.ಸಿದ್ದಪ್ಪ ಮೇಲೆ ದೂರು ದಾಖಲಾಗಿದೆ. ಖಚಿತ ಮಾಹಿತಿ ಪಡೆದ ಪ್ರಭಾರ ಕಂದಾಯ ನಿರೀಕ್ಷಕ ಹೆಚ್.ಹೊನ್ನಪ್ಪ, ಗ್ರಾಮ ಲೆಕ್ಕಾಧಿಕಾರಿ ಎಸ್.ಎಂ.ಚನ್ನಬಸಯ್ಯ, ಪಿಡಿಒ ಅಂಜಿನಪ್ಪ, ನೀರಗಂಟಿ ಕೊಟ್ರೇಶ್ ಅವರ ತಂಡ ನಿಲುವಂಜಿ ಗ್ರಾಮದಲ್ಲಿ ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಮೇ. 20ರಂದು ರಾತ್ರಿ 9 ಗಂಟೆಗೆ ಭೇಟಿ ನೀಡಿದಾಗ, 20ರಿಂದ 25 ಜನ ಸೇರಿ ಆರತಿ ಕಾರ್ಯಕ್ರಮ ನಡೆಸುತ್ತಿದ್ದರು. ಮೇ. 21ರ ಶುಕ್ರವಾರ ಮದುವೆ ನಿಶ್ಚಯವಾಗಿತ್ತು. ಆದರೆ ಸಂಬಂಧಿಕರೊಬ್ಬರು ಮೃತರಾಗಿದ್ದರಿಂದ ಗುರುವಾರ ರಾತ್ರಿ 9 ಗಂಟೆಗೆ ಮದುವೆ ಮಾಡಿದ್ದಾರೆ ಎನ್ನಲಾಗಿದೆ.ಬೆಣ್ಣಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಟಿ.ಅಂಜಿನಪ್ಪ ನೀಡಿದ ದೂರಿನ ಮೇರೆಗೆ ಚಿಗಟೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊರೊನಾ ನಿಯಮ ಉಲ್ಲಂಘಿಸಿ ಮದುವೆ: ವೈದ್ಯ ವಧು, ವರ ಸೇರಿ ಐವರ ಮೇಲೆ ಪ್ರಕರಣ ದಾಖಲು
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.