ನಾಂದೇಡ್: ಮಧ್ಯಾಹ್ನದ ಬಿಸಿಯೂಟದಲ್ಲಿ ಸತ್ತ ಹಾವು ಪತ್ತೆಯಾಗಿರುವ ಘಟನೆಯು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಗರ್ಗವಾನ್ ಜಿಲ್ಲೆಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಶಾಲಾ ಮಕ್ಕಳಿಗೆ ಬಡಿಸಲಾಗುವಂತಹ ಕಿಚಡಿಯಲ್ಲಿ ಈ ಸತ್ತ ಹಾವು ಕಂಡುಬಂದಿದೆ. ಇದನ್ನು ನೋಡಿದ ಅಲ್ಲಿನ ಸಿಬ್ಬಂದಿ ಒಂದು ಕ್ಷಣ ಹೌಹಾರಿದ್ದಾರೆ.
ಒಂದರಿಂದ ಐದನೇ ತರಗತಿವರೆಗಿನ ಸುಮಾರು 80 ಮಕ್ಕಳಿಗೆ ಈ ಕಿಚಡಿ ಬಡಿಸಲಾಗುತ್ತಿತ್ತು. ತಕ್ಷಣವೇ ಬಿಸಿಯೂಟ ಬಡಿಸುವುದನ್ನು ಸಿಬ್ಬಂದಿ ನಿಲ್ಲಿಸಿದ್ದಾರೆ.
ಈ ಬಗ್ಗೆ ನಾಂದೇಡ್ ಜಿಲ್ಲಾ ಶಿಕ್ಷಣಾಧಿಕಾರಿ(ಡಿಇಒ) ಪ್ರಶಾಂತ್ ದಿಗ್ರಾಸ್ಕರ್ ತನಿಖೆಗೆ ಆದೇಶಿಸಿದ್ದಾರೆ.