News Kannada
Wednesday, March 22 2023

ದೇಶ-ವಿದೇಶ

ದಲೈಲಾಮಾ ಭೇಟಿ ಧಾರ್ಮಿಕವಾಗಿದ್ದು, ಚೀನಾ ಈ ವಿಚಾರವಾಗಿ ವಿವಾದಗಳನ್ನು ಸೃಷ್ಟಿಸಬಾರದು: ಕೇಂದ್ರ ಸರ್ಕಾರ

Photo Credit :

ದಲೈಲಾಮಾ ಭೇಟಿ ಧಾರ್ಮಿಕವಾಗಿದ್ದು, ಚೀನಾ ಈ ವಿಚಾರವಾಗಿ ವಿವಾದಗಳನ್ನು ಸೃಷ್ಟಿಸಬಾರದು: ಕೇಂದ್ರ ಸರ್ಕಾರ

ಹೊಸದಿಲ್ಲಿ: ಅರುಣಾಚಲ ಪ್ರದೇಶಕ್ಕೆ  ದಲೈಲಾಮಾ  ಭೇಟಿ ಕೊಡುತ್ತಿರುವುದು ಧಾರ್ಮಿಕವಾಗಿದ್ದು, ರಾಜಕೀಯವಾಗಿ ಅಲ್ಲ. ಹೀಗಾಗಿ ಈ ವಿಚಾರವಾಗಿ ಚೀನಾ ವಿವಾದಗಳನ್ನು ಸೃಷ್ಟಿಸಬಾರದು ಎಂದು ಮಂಗಳವಾರ ಕೇಂದ್ರ ಸರ್ಕಾರ ತಿಳಿಸಿದೆ.

ಏ.4 ರಿಂದ 13ರವರೆಗೆ ಅರುಣಾಚಲ ಪ್ರದೇಶದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದಲೈಲಾಮಾ ಅವರು ಭಾಗವಹಿಸುತ್ತಿದ್ದು, ಈ ಹಿನ್ನಲೆ ಚೀನಾ ತೀವ್ರ ಟೀಕೆ ಹಾಗೂ ವಿರೋಧಗಳನ್ನು ವ್ಯಕ್ತಪಡಿಸುತ್ತಿದೆ.

ಕೇಂದ್ರ ಸರ್ಕಾರದ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು, ಈ ಹಿನ್ನಲೆ ಪ್ರತಿಕ್ರಿಯೆ ನೀಡಿದ್ದು, ದಲೈಲಾಮಾ ಅವರು ಗೌರವಯುತ ಗುರುಗಳಾಗಿದ್ದು, ಭಾರತದ ಜನತೆ ಅವರನ್ನು ಗೌರವಿಸುತ್ತದೆ. ದಲೈಲಾಮಾ ಭೇಟಿ ಧಾರ್ಮಿಕವಾಗಿದ್ದು, ರಾಜಕೀಯ ಪ್ರೇರಿತವಲ್ಲ. ಭೇಟಿ ವೇಳೆ ದಲೈಲಾಮಾ ಅವರು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿದ್ದು, ಭಾರತದ ಹಲವು ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ಈ ವಿಚಾರ ಸಂಬಂಧ ವಿವಾದವನ್ನು ಸೃಷ್ಟಿಸಬಾರದು ಎಂದು ಅವರು ತಿಳಿಸಿದ್ದಾರೆ.

ಚೀನಾ ರಾಷ್ಟ್ರದ ಆಂತರಿಕ ವಿಚಾರದಲ್ಲಿ  ಭಾರತ ತಲೆ ಹಾಕಿಲ್ಲ. ಭಾರತದ ಆಂತರಿಕ ವಿಚಾರಗಳಲ್ಲಿ ಚೀನಾ ಕೂಡ  ತಲೆ ಹಾಕಬಾರದು. ಅರುಣಾಚಲ ಪ್ರದೇಶ ಜನತೆ ನೆರೆರಾಷ್ಟ್ರದೊಂದಿಗೆ ಉತ್ತಮ ಸಂಬಂಧದೊಂದಿಗೆ ಇರಲು ಬಯಸುತ್ತದೆ. ಚೀನಾ ನೀತಿಗಳನ್ನು ಭಾರತ ಗೌರವಿಸುತ್ತದೆ. ಇದೇ ರೀತಿಯ ಪ್ರತಿಕ್ರಿಯೆಯನ್ನೇ ಚೀನಾ ರಾಷ್ಟ್ರದಿಂದಲೂ ಭಾರತ ಬಯಸುತ್ತದೆ.

See also  ಬೆನ್ನನ್ನೇ ಮೆಟ್ಟಿಲಾಗಿಸಿ ಸಂತ್ರಸ್ತರಿಗೆ ನೆರವಾಗಿದ್ದ ಮೀನುಗಾರನಿಗೆ ಮಹೀಂದ್ರದಿಂದ ಬಂಪರ್ ಗಿಫ್ಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು