ನವದೆಹಲಿ: ಭಾರತೀಯ ನೌಕಾಪಡೆ ದಿನಾಚರಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ನೌಕಾಪಡೆ ಪರಾಕ್ರಮ ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.
ದೇಶದ ಕರಾವಳಿ ರಕ್ಷಣೆ ಮಾಡುವಲ್ಲಿ ನೌಕಾಪಡೆ ಅದ್ಭುತ ಕಾರ್ಯ ಮಾಡುತ್ತಿದೆ. ನೈಸರ್ಗಿಕ ವಿಕೋಪ ಸೇರಿದಂತೆ ಸಂಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸಿ ಮಾನವೀಯತೆಯನ್ನು ಮೆರೆದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
೧೯೭೧ರಲ್ಲಿ ಭಾರತ ಪಾಖಿಸ್ತಾನ ಯುದ್ಧ ನಡೆದಾಗ ಡಿಸೆಂಬರ್ ೪ರಂದು ಕರಾಚಿ ಬಂದರು ಮೇಲೆ ಭಾರತೀಯ ನೌಕಾಪಡೆ ದಾಳಿ ನಡೆಸಿ ತಕ್ಕ ಉತ್ತರ ನೀಡಿತ್ತು. ಈ ದಾಳಿ ಸ್ಮರಣಾರ್ಥ ಪ್ರತಿವರ್ಷ ಡಿ.೪ರಂದು ನೌಕಾಪಡೆ ದಿನವನ್ನು ಆಚರಿಸಲಾಗುತ್ತಿದೆ.